ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಸೋಲಬಾರದು: ರಾಜ್ಯದ ಜನತೆಗೆ ಸಿಎಂ ಪತ್ರ

ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ, ನನಗೆ ಈ ಬಗ್ಗೆ ಹೆಮ್ಮೆಯಿದೆ, ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ಸಮಯ ಬರುತ್ತದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ, ನನಗೆ ಈ ಬಗ್ಗೆ ಹೆಮ್ಮೆಯಿದೆ, ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ಸಮಯ ಬರುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್  ಕರ್ನಾಟಕ ಮಾದರಿ ಅನುಸರಿಸುವಂತ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ಸಕಾರಾತ್ಮಕ ಪ್ರಕರಣಗಳ ಸಂಪರ್ಕ ಪತ್ತೆ ಮತ್ತು ಭೌತಿಕ / ಫೋನ್ ಆಧಾರಿತ ಮನೆಯ ಸಮೀಕ್ಷೆ ದೇಶದಲ್ಲಿ ‘ಪುನರಾವರ್ತಿಸಲು ಯೋಗ್ಯವಾಗಿದೆ’ ಎಂದು ಕೇಂದ್ರ ಸರ್ಕಾರ ನಂಬಿದೆ.

ನಮ್ಮ ಅಧಿಕಾರಿಗಳು ಮತ್ತು ಕರೋನಾ ವಾರಿಯರ್ಸ್ ಅವರ ಮಾಡಿದ ಸೇವೆಯಿಂದಾಗಿ ಮನ್ನಣೆಗೆ ಅರ್ಹರಾಗಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ನನ್ನ ತಂಡ ನನಗೆ ಹೊಸ ಶಕ್ತಿ ತುಂಬಿದೆ. ಕೊರೋನಾದಿಂದಾಗಿ ಇಡೀ ಪ್ರಪಂಚವೇ ತತ್ತರಿಸಿದೆ, ಮತ್ತೊಂದು ದೇಶಕ್ಕೆ ಸಹಾಯ ಮಾಡಲು ಯಾವುದೇ ದೇಶ ಶಕ್ತವಾಕಗಿಲ್ಲ.

12 ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ರಚಿಸಿದ ವಚನವೊಂದು ಸದ್ಯ ಜಗತ್ತು ಇರುವ ಪರಿಸ್ಥಿತಿಗೆ  ಹಿಡಿದ ಕೈ ಕನ್ನಡಿಯಾಗಿದೆ.

ಒಲೆ ಹೊತ್ತಿ ಉರಿದಡೆ ನಿಲಲುಬಹುದಲ್ಲದೆ
ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ?
ಏರಿ ನೀರುಂಬೊಡೆ ಬೇಲಿ ಹೊಲವ ಮೆಯ್ದೊಡೆ
ತಾಯ ಮೊಲೆಹಾಲು ವಿಷವಾಗಿ ಕೊಲುವೊಡೆ
ಇನ್ಯಾರಿಗೆ ದೂರುವೆನಯ್ಯ ಕೂಡಲಸಂಗಮದೇವಾ !

ಈ ಪರಿಸ್ಥಿತಿಯಿಂದ ಹೊರಬರಲು ನಾವು ತಂತ್ರ ರೂಪಿಸಿದ್ದೇವೆ, ತಾಂತ್ರಿಕ, ಮಾನವೀಯ ವಿಧಾನ ಮತ್ತು ವೈದ್ಯಕೀಯ ಬೆಂಬಲ - ಬಹುಮುಖಿ ತಂತ್ರವು ಆರಂಭಿಕ ಹಂತದಲ್ಲಿ  ಪ್ರಾಬಲ್ಯ ಸಾಧಿಸಿತು.

ಆರಂಭಿಕ ಹಂತದಿಂದಲೂ  ನಾವು ಬಿಬಿಎಂಪಿಯಲ್ಲಿ ಹೈಟೆಕ್  ವಾರ್ ರೂಮ ಹೊಂದಿದ್ದೇವೆ, ಮಾಹಿತಿ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯಲ್ಲಿ ಕೆಲಸ ಮಾಡಿ ಮಾದರಿಯಾಗಿದೆ.

ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಿ ಮತ್ತು ಕೊರೋನಾ ವೈರಸ್ ಹರಡುವಿಕೆಯ ಬಗ್ಗೆ ಗಮನ ಹರಿಸಿ. ಕಾರ್ಯತಂತ್ರದ ಎರಡನೆಯ ಹಂತದ ನಿರ್ಣಾಯಕ ಅಂಶವೆಂದರೆ ರಾಜ್ಯದ ಆರ್ಥಿಕ ಆರೋಗ್ಯವನ್ನು ಸುಧಾರಿಸುವುದು.

ಸೋಂಕು ಹರಡದಂತೆ ತಡೆಗಟ್ಟುವುದು ಪ್ರಮುಖ ಕೆಲಸವಾಗಿದೆ, ಆದರೆ ಕಾರ್ಮಿಕ ವರ್ಗದ ಆರ್ಥಿಕ ತೊಂದರೆಯನ್ನು ಸಹ ಪರಿಹರಿಸಲಾಗಿದೆ ಎಂದು ರಾಜ್ಯದ ಜನತೆಗೆ  ಮುಖ್ಯಮಂತ್ರಿಗಳು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com