ಬೆಂಗಳೂರು: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ದರಗಳನ್ನು ಹೆಚ್ಚಿಸಲು ಮುಂದಾಗಿರುವ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರಬೆಳಗಿನ ಉಪಾಹಾರ 5 ರೂ. ಗಳಿಂದ 10 ರೂ.ಗಳಿಗೆ ಹಾಗೂ ಮಧ್ಯಾಹ್ನದ ಊಟವನ್ನು 10.ರೂಗಳಿಂದ 15 ರೂ .ಗಳಿಗೆ ಹೆಚ್ಚಿಸಲು ಮುಂದಾಗಿದ್ದು, ಬಡಜನರಿಗೆ ಇನ್ನಷ್ಟು ಬರೆ ಹಾಕಲು ಮುಂದಾಗಿದೆ ಎಂದು ಎಎಪಿ ಆರೋಪಿಸಿದದೆ.
ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದ್ದಾಗ ಮತದಾರರ ಮನ ಗೆಲ್ಲುವ ತರಾತುರಿಯಿಂದ ಆರಂಭಿಸಿದ ಇಂದಿರಾ ಕ್ಯಾಂಟೀನ್ ಯೋಜನೆ ಹತ್ತು ಹಲವು ವಿವಾದಗಳಿಗೆ ಸಿಲುಕಿದೆ.
Advertisement