ಸ್ನೇಹಿತನ ಜೊತೆಗೆ ತೆರಳಿದ್ದ ಯುವಕ ಶವವಾಗಿ ಪತ್ತೆ

ಸ್ನೇಹಿತನೊಂದಿಗೆ ತೆರಳಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ  ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಸೋನಹಳ್ಳಿ ಬಳಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಸ್ನೇಹಿತನೊಂದಿಗೆ ತೆರಳಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ  ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ  ಸೋನಹಳ್ಳಿ ಬಳಿ ನಡೆದಿದೆ. 

ತಗಡೂರು ಗ್ರಾಮದ ನಿವಾಸಿ ಮನೋಜ್​ ಕುಮಾರ್,  ರಾಮಚಂದ್ರರಾವ್​​ ನಾಲೆಯ ತೂಬಿನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ.  ಮೃತ ಮನೋಜ್​ ಕುಮಾರ್​ ಗುರುವಾರ ಸ್ನೇಹಿತ ವಿಜಯ್​​ ಕುಮಾರ್​​ ಜೊತೆ ತೆರಳಿದ್ದ. ಬಳಿಕ ಗೆಳೆಯರೆಲ್ಲರೂ ಸೇರಿ ರಾಮಚಂದ್ರರಾವ್​ ನಾಲೆ ಬಳಿ ಪಾರ್ಟಿ ಮಾಡಿದ್ದರು. ಆದರೆ, ಆ ಪಾರ್ಟಿಯಲ್ಲಿ ಇಬ್ಬರು ಅಪರಿಚಿತರು ಸೇರಿಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ಅಪರಿಚಿತರು ಹಾಗೂ ಮನೋಜ್​ ಕುಮಾರ್​ ನಡುವೆ ಜಗಳವಾಗಿ ಮಾತಿಗೆ ಮಾತು ಬೆಳೆದಿದೆ. ಈ ಜಗಳ ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಹೊಡೆದಾಟ ಕೂಡ ಆಗಿತ್ತು. ಅಪರಿಚಿತರು ವಿಜಯ್​ಕುಮಾರ್​ ಬೈಕ್​ನ್ನು ನಾಲೆಗೆ ತಳ್ಳಿದ್ದರು. ಆಗ ವಿಜಯ್​ ಕುಮಾರ್​ ಅಲ್ಲಿಂದ ಪರಾರಿಯಾಗಿದ್ದನು.‌ನಂತರ ಸ್ವಲ್ಪ‌ ಸಮಯದ ನಂತರ ಹಿಂದಿರುಗಿ ಆತ ನಾಲೆ ಬಳಿ ಬಂದಾಗ ಮನೋಜ್ ಕುಮಾರ್ ಕೂಡ ನಾಪತ್ತೆಯಾಗಿದ್ದನು. ತಕ್ಷಣ ವೇ ಈ ವಿಷಯವನ್ನು  ವಿಜಯ್ ಕುಮಾರ್, ಮನೋಜ್​ ಪೋಷಕರಿಗೆ  ತಿಳಿಸಿದ್ದನು ಎನ್ನಲಾಗಿದೆ.

ಶುಕ್ರವಾರ ಮನೋಜ್​ ಕುಮಾರ್​​ ಮೃತದೇಹ ಪತ್ತೆಯಾಗಿದ್ದು, ಮನೋಜ್​ ಕಿವಿ, ಮರ್ಮಾಂಗ, ಹುಬ್ಬುಗಳ ಮೇಲೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೋಜ್ ಪೋಷಕರು ಇದು ಕೊಲೆ ಎಂದು ಆರೋಪಿಸಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com