ಮಂಡ್ಯ: ತೈಲೂರು ಬಳಿ ಪೊಲೀಸ್ ಬಸ್ ಪಲ್ಟಿ, 11ಕ್ಕೂ ಹೆಚ್ಚು ಕೆಎಸ್‌ಆರ್‌ಪಿ ಪೊಲೀಸರಿಗೆ ಗಾಯ

ಭದ್ರತಾ ಗಸ್ತು ಕರ್ತವ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಪಿ ಪೊಲೀಸ್ ಬಸ್‌ವೊಂದು ಸ್ಟಿಯರಿಂಗ್ ಲಾಕ್‌ಆಗಿ ರಸ್ತೆಬದಿಯ ಹಳ್ಳಕ್ಕೆ ಉರುಳಿಬಿದ್ದು 11ಕ್ಕೂ ಹೆಚ್ಚುಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ಮದ್ದೂರು ತಾಲ್ಲೂಕಿನ ತೈಲೂರು ಕೆರೆ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಮಂಡ್ಯ: ತೈಲೂರು ಬಳಿ ಪೊಲೀಸ್ ಬಸ್ ಪಲ್ಟಿ; 11ಕ್ಕೂ ಹೆಚ್ಚು ಕೆಎಸ್‌ಆರ್‌ಪಿ ಪೊಲೀಸರಿಗೆ ಗಾಯ
ಮಂಡ್ಯ: ತೈಲೂರು ಬಳಿ ಪೊಲೀಸ್ ಬಸ್ ಪಲ್ಟಿ; 11ಕ್ಕೂ ಹೆಚ್ಚು ಕೆಎಸ್‌ಆರ್‌ಪಿ ಪೊಲೀಸರಿಗೆ ಗಾಯ

ಮಂಡ್ಯ: ಭದ್ರತಾ ಗಸ್ತು ಕರ್ತವ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಪಿ ಪೊಲೀಸ್ ಬಸ್‌ವೊಂದು ಸ್ಟಿಯರಿಂಗ್ ಲಾಕ್‌ಆಗಿ ರಸ್ತೆಬದಿಯ ಹಳ್ಳಕ್ಕೆ ಉರುಳಿಬಿದ್ದು 11ಕ್ಕೂ ಹೆಚ್ಚುಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ಮದ್ದೂರು ತಾಲ್ಲೂಕಿನ ತೈಲೂರು ಕೆರೆ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಚಾಲಕ ನಾಗಣ್ಣ,ರಿಯಾಜ್,ಚಂದ್ರಶೇಖರ್,ಸೈಯ್ಯದ್, ಸಾಗರ್, ರಾಘವೇಂದ್ರ, ರಾಮನಗೌಡ ಹಾಗೂ ಆನಂದ್ ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನೆಲೆ;

ಸೋಮವಾರ ರಾತ್ರಿ ಆದಿಚುಂಚನಗರಿಯಲ್ಲಿ ನಡೆದ ರಥೋತ್ಸವದ ಭದ್ರತಾ ಕರ್ತವ್ಯ ಮುಗಿಸಿಕೊಂಡಿದ್ದ, ಮೈಸೂರು ವಿಭಾಗದ ೫ ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ತುಕಡಿಯ ಪೊಲೀಸರು ಇಂದು ಮಧ್ಯಾಹ್ನ ೧೨ ರ ಸಮಯದಲ್ಲಿ ಎಂದಿನAತೆಯೇ ಪೊಲೀಸ್ ಬಸ್ (ಕೆಎ.೨೭,ಜಿ.೪೦೨೪)ನಲ್ಲಿ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮಕ್ಕೆ ಗಸ್ತು ಭದ್ರತಾ ಕರ್ತವ್ಯಕ್ಕೆ ತೆರಳುತ್ತಿದ್ದರು.

ಮಾರ್ಗ ಮಧ್ಯೆ ತೈಲೂರು ಕೆರೆ ಏರಿ ಕೆಳಗೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದಿದೆ,ಪರಿಣಾಮವಾಗಿ ಬಸ್‌ನಲ್ಲಿದ್ದ  ಸುಮಾರು ೨೦ ಮಂದಿಯ ಪೈಕಿ ಚಾಲಕ ನಾಗಣ್ಣ,
ರಿಯಾಜ್,ಚಂದ್ರಶೇಖರ್,ಸೈಯ್ಯದ್, ಸಾಗರ್, ರಾಘವೇಂದ್ರ, ರಾಮನಗೌಡ ಹಾಗೂ ಆನಂದ್ ಸೇರಿದಂತೆ ೧೧ ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. ಈ ಅಪಘಾತಕ್ಕೆ ಸ್ಟಿಯರಿಂಗ್ ಲಾಕ್ ಆಗಿರೋದೇ ಕಾರಣ ಅಂತ ಮೇಲ್ನೋಟಕ್ಕೆ ತಿಳಿದುಬಂದಿದೆ.

ಇನ್ನು ಪೊಲೀಸ್ ಬಸ್ ಅಪಘಾತವಾಗಿರುವುದನ್ನು ಗಮನಿಸಿದ ಸ್ಥಳೀಯರು ಬಸ್‌ವೊಳಗೆ ಸಿಲುಕಿಕೊಂಡಿದ್ದ ಪೊಲೀಸರನ್ನು ಹೊರತೆಗೆಯುವ ಮೂಲಕ ರಕ್ಷಿಸುವ ಕೆಲಸಮಾಡಿದ್ದಾರೆ. ಸುದ್ದಿತಿಳಿದು ಸ್ಥಳಕ್ಕಾಗಮಿಸಿದ ಮದ್ದೂರು ಪೊಲೀಸರು ಸ್ಥಳಿಯರ ನೆರವಿನೊಂದಿಗೆ ಗಾಯಾಳುಗಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಉರುಳಿಬಿದ್ದಿದ್ದರೂ ಅದೃಷ್ಟವಶಾತ್ ಎಲ್ಲರಿಗೂ ಸಣ್ಣಪುಟ್ಟಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು,ಮದ್ದೂರು ಆಸ್ಪತ್ರೆಗೂ ಭೇಟಿ ಕೊಟ್ಟು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಈ ಘಟನೆ ಸಂಬAಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com