ಮದ್ದೂರು: ಕೊಂಡಕ್ಕೆ ಬಿದ್ದ ಪೂಜಾರಿ; ಪ್ರಾಣಾಪಾಯದಿಂದ ಪಾರು.

ಕೊಂಡ ಹಾಯುವವೇಳೆ ಕೊಂಡಕ್ಕೆ ಬಿದ್ದು ಪೂಜಾರಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕರಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಕೊಂಡ ಹಾಯುವವೇಳೆ ಕೊಂಡಕ್ಕೆ ಬಿದ್ದು ಪೂಜಾರಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕರಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಣ್ಣೂರು ಗ್ರಾಮದ ರೇವಣ್ಣ ಗಾಯಗೊಂಡ ಪೂಜಾರಿಯಾಗಿದ್ದು ಬಸವೇಶ್ವರ ಸ್ವಾಮಿ ದೇವಸ್ಥಾನದ ಕೊಂಡಮಹೋತ್ಸವದ ವೇಳೆ ಅವಘಡ ಸಂಭವಿಸಿದೆ.

ಪೂಜಾರಿ ರೇವಣ್ಣ ಅವರನ್ನು ಕೊಂಡದಿAದರಕ್ಷಣೆ ಮಾಡಲು ಹೋದವರೂ ಆಯ ತಪ್ಪಿಬಿದ್ದಿದ್ದು, ಅವರಿಗೂ ಸುಟ್ಟ ಗಾಯಾಗಳಾಗಿವೆ.

ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗಿದ್ದು, ಪೂಜಾರಿಯನ್ನು ಮಂಡ್ಯಮಿಮ್ಸ್ಗೆ ದಾಖಲು ಮಾಡಲಾಗಿದೆ. ಕೆ.ಎಂ.ದೊಡ್ಡಿ ಪೊಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ನಾಗಯ್ಯ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com