ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಕೋವಿಡ್-೧೯ ಭೀತಿ ವಿಧಾನಸೌಧಕ್ಕೂ ಪಸರಿಸಿದೆ.
ಕರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣ ಹಾಗೂ ಸಭಾಧ್ಯಕ್ಷರ ಕೊಠಡಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದೆ.
ಮಾ17ರಿಂದ 20ರವರೆಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶ ನಿಷೇಧವಾಗಿರುವುದರಿಂದ ಶಾಸಕರಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ತಮ್ಮ ಕಡೆಯವರಿಗೆ ವಿಧಾನಸೌಧಕ್ಕೆ ಪ್ರವೇಶಕ್ಕಾಗಿ ಶಿಫಾರಸು ಮಾಡದಂತೆ ಕಾಗೇರಿ ಸೂಚಿಸಿದ್ದಾರೆ.
Advertisement