ಬಾಗಲಕೋಟೆ: ರಸ್ತೆ ಬದಿಯ ಪಾನ್ ಶಾಪ್ ಮುಂದೆ ನಿಂತವರ ಮೇಲೆ ಲಾರಿಯೊಂದು ನಿಗ್ಗಿದ ಪರಿಣಾಮ ಲಾರಿಗೆ ಸಿಕ್ಕು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಹಾನಂದ ಕರಿ(೧೬) ಸುರೇಬಾನ, ಲಕ್ಷö್ಮಣ ವಿಠ್ಠಲ ಸಾವಜಿ(೩೫) ಕೆರೂರ, ಪೂಜಾರ ಅರ್ಜುನ ಹಳಪೇಟೆ( ೨೨) ನರಗುಂದ ಎಂದು ಗುರುತಿಸಲಾಗಿದೆ. ಮಂಜುಳಾ ಜವಳಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಅತಿಯಾದ ವೇಗದಿಂದ ಕೂಡಿದ್ದು ಚಾಲಕನ ನಿಯಂತ್ರಣ ತಪ್ಪಿದೆ ಈ ವೇಳೆ ಲಾರಿ ರಸ್ತೆಯ ಬದಿಗಿದ್ದ ಪಾನ್ ಶಾಪ್ ನತ್ತ ನುಗ್ಗಿ ಅಲ್ಲಿ ಚಹಾ ಸೇವಿಸುತ್ತಿದ್ದವರಿಗೆ ಗುದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿ ಇನ್ನೂ
ಆರು ಮಂದಿ ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement