ಭಾರತವನ್ನು ಮಹಾಮಾರಿ ಕೊರೋನಾ ವೈರಸ್ ಇನ್ನಿಲ್ಲದಂತೆ ಬಾದಿಸುತ್ತಿದೆ. ಇದರ ನಡುವೆ ಇಟಲಿಯಲ್ಲಿನ ಪರಿಸ್ಥಿತಿ ಕುರಿತಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಮಾಡಿರುವ ಟ್ವೀಟ್ ಇದೀಗ ವಿವಾದಕ್ಕೀಡಾಗಿದೆ.
ಏಸು ಎಲ್ಲರನ್ನು ಪ್ರೀತಿಸುತ್ತಾನೆ ಎಂಬ ಸಂದೇಶದೊಂದಿಗೆ ಕ್ರೈಸ್ತ ಮಿಷನರಿಗಳು ಜಗತ್ತಿನಾದ್ಯಂತ ಸಂಚರಿಸುತ್ತಾರೆ. ಆದರೆ ಇಟಲಿಯಲ್ಲಿ ಕೊರೋನಾ ಪೀಡಿತ 80 ವರ್ಷದ ಮೇಲ್ಪಟ್ಟ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಲ್ಲಿನ ಸರ್ಕಾರ ವಿಫಲವಾಗಿದೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲು ತಿರಸ್ಕರಿಸುತ್ತಾರೆ. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ ಎಂದಾದರೆ 80ಕ್ಕಿಂತ ಹೆಚ್ಚು ವಯಸ್ಸಿನ ಜನರನ್ನು ಏಕೆ ಪ್ರೀತಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ನೆಟಿಗರು ಗರಂ ಆಗಿದ್ದು ಟ್ರೋಲ್ ಮಾಡುತ್ತಿದ್ದಾರೆ. ಇದರ ನಡುವೆ ನಟ ಡಾಲಿ ಧನಂಜಯ್ ಕೂಡ ಚಕ್ರವರ್ತಿ ಟ್ವೀಟ್ ಗೆ ಪ್ರತ್ಯುತ್ತರ ನೀಡುತ್ತಾ ಏನಾದರು ಆಗು ಮೊದಲು ಮಾನವನಾಗು ಎಂದು ಟ್ವೀಟಿಸಿ ಮಾನವೀಯತೆ ಪಾಠ ಮಾಡಿದ್ದಾರೆ.
Advertisement