ಬೆಂಗಳೂರು: ಅಮಾಯಕರ ನಿವೇಶನಗಳನ್ನು ಕಬಳಿಸಲು ಹೊಂಚು ಹಾಕಿದ್ದ ವಿನಯ್ ಕುಮಾರ್ ಅಲಿಯಾಸ್ ಸ್ಟಾಂಪ್ ವಿನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ
ಪ್ರಮುಖ ಆರೋಪಿ ಲಗ್ಗೆರೆ ಕೆಂಪೇಗೌಡ ಲೇಔಟ್ ನ4ನೇ ಮೈನ್ ನಿವಾಸಿ ವಿನಯ್ ಕುಮಾರ್ ಅಲಿಯಾಸ್ ಸ್ಟಾಂಪ್ ವಿನಿ ಬಂಧಿತ ಆರೋಪಿ
ಘಟನೆಯ ವಿವರ: ರೂಪಲಕ್ಷ್ಮಿ ಎಂಬವರು ಬಸವೇಶ್ವರನಗರದ ಕುರುಬರಹಳ್ಳಿ ಕರ್ನಾಟಕ ಲೇಔಟ್ನ ನಿವೇಶನವೊಂದರ ಮಾಲೀಕರಾಗಿದ್ದು, ಅಮೆರಿಕದಲ್ಲಿ ವಾಸವಾಗಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳಾದ ವಿನಯ್ ಕುಮಾರ್, ವಿಶ್ವನಾಥ್ ಹಾಗೂ ಇತರರು ಈ ನಿವೇಶನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ಶಿವಮ್ಮ ಎಂಬವರಿಗೆ ಹಣದ ಆಮಿಷವೊಡ್ಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು ಆಕೆಯನ್ನು ಮೂಲ ಮಾಲೀಕಳೆಂದು ಬಿಂಬಿಸಿ ಈ ಸೈಟನ್ನು ಆರೋಪಿ ರಾಜ್ ಚಂದ್ರಶೇಖರ್ ಎಂಬಾತನ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.
ಈ ಮೂಲಕ ಅಕ್ರಮ ಹಣ ಸಂಪಾದನೆ ಮಾಡಿಕೊಂಡಿದ್ದರು. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
Advertisement