ಬೆಂಗಳುರು: ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಕರೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೆಂಬಲ ಸೂಚಿಸಿದ್ದಾರೆ.
ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಹಾಗೂ ದೇಶದ ಎಲ್ಲಾ ರಾಜ್ಯಗಳು ತೆಗೆದುಕೊಂಡಿರುವ ಉಪಕ್ರಮಗಳನ್ನು ನಾನು ಅಭಿನಂದಿಸುತ್ತೇನೆ. ಪ್ರಧಾನಿಯ ವಿನಂತಿ ಹಿಂದಿರುವ ಕಾಳಜಿ ಅರಿತುಕೊಂಡು ಸಂಯಮದಿಂದ ಎಲ್ಲರೂ ಸಹಕರಿಸಿ ಜನತಾ ಕರ್ಪ್ಯೂ ವನ್ನು ಎಲ್ಲರೂ ಯಶಸ್ವಿಗೊಳಿಸಬೇಕು, ಎಂದು ದೇಶದ ನಾಗರಿಕರಿಗೆ ಮಾಜಿ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ನಿನ್ನೆ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿ ದೇಶದ ಜನ ಸಂಕಲ್ಪ ಹಾಗೂ ಸಂಯಮದ ಮೂಲಕ ಕೊರೋನಾವೈರಸ್ ಅನ್ನು ಎದುರಿಸಬೇಕು ಎಂದಿದ್ದಾರೆ.
Advertisement