ಕೊರೋನಾ ಭೀತಿ: ನಾಳೆ ವಿಧಾನಮಂಡಲ ಅಧಿವೇಶನಕ್ಕೆ ತೆರೆ

ಕೊರೋನಾ ವೈರಾಣು ಹರಡುವಿಕೆ ತಡೆ ಕ್ರಮದ ಅಂಗವಾಗಿ ರಾಜ್ಯ ವಿಧಾನಮಂಡಲ ಕಲಾಪವನ್ನು ಮಂಗಳವಾರ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.
ವಿಧಾನಸಭೆ
ವಿಧಾನಸಭೆ

ಬೆಂಗಳೂರು: ಕೊರೋನಾ ವೈರಾಣು ಹರಡುವಿಕೆ ತಡೆ ಕ್ರಮದ ಅಂಗವಾಗಿ ರಾಜ್ಯ ವಿಧಾನಮಂಡಲ ಕಲಾಪವನ್ನು ಮಂಗಳವಾರ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.

ಮಂಗಳವಾರ ಬೆಳಗ್ಗೆ 10 ಗಂಟೆಗೆ ಸದನದಲ್ಲಿ 2020–21ನೇ ಸಾಲಿನ ಆಯವ್ಯಯದ ಮೇಲಿನ ಸಾಮಾನ್ಯ ಚರ್ಚೆ ಹಾಗೂ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆ ನಡೆಯಲಿದೆ. ಜೊತೆಗೆ, 2019–20ನೇ ಸಾಲಿನ ಪೂರಕ ಅಂದಾಜುಗಳು (3ನೇ ಕಂತು) ಮೇಲಿನ ಚರ್ಚೆ ನಡೆಯಲಿದ್ದು, ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ. 

ನಂತರ ಧನವಿನಿಯೋಗ ವಿಧೇಯಕಗಳು ಸೇರಿದಂತೆ ಇತರ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು. 

ನಾಳೆ ಯಾವುದೇ ಪ್ರಶ್ನೋತ್ತರ ಹಾಗೂ ಇತರ ಕಾರ್ಯಕಲಾಪಗಳು ನಡೆಯುವುದಿಲ್ಲ. ನಂತರ ಅಧಿವೇಶನವನ್ನು ಅನಿರ್ಧಿಷ್ಟಾಕಾಲದವರೆಗೆ ಮುಂದೂಡಲಾಗುವುದು ಎಂದು ಸೋಮವಾರ ನಡೆದ ವಿಧಾನಮಂಡಲ ಕಾರ್ಯಕಲಾಪಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com