ಮುಖ್ಯಮಂತ್ರಿಗಳ ನಿವಾಸ ಕಾವೇರಿ ಎದುರು ಕೊರೋನಾ ಶಂಕಿತರು!

ಕೊರೋನಾ ಕ್ವಾರಂಟೈನ್​ನಲ್ಲಿರಬೇಕಾದ ನಾಲ್ವರು ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರ ನಿವಾಸದ ಬಳಿ ಸುಳಿದಾಡಿ ಆತಂಕ ಸೃಷ್ಟಿಸಿದ್ದಾರೆ
ಮುಖ್ಯಮಂತ್ರಿ ಬಿಎಸ್ ವೈ ಮನೆ
ಮುಖ್ಯಮಂತ್ರಿ ಬಿಎಸ್ ವೈ ಮನೆ

ಬೆಂಗಳೂರು: ಕೊರೋನಾ ಕ್ವಾರಂಟೈನ್​ನಲ್ಲಿರಬೇಕಾದ ನಾಲ್ವರು ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರ ನಿವಾಸದ ಬಳಿ ಸುಳಿದಾಡಿ ಆತಂಕ ಸೃಷ್ಟಿಸಿದ್ದಾರೆ

ಪ್ಯಾಲೇಸ್ ರಸ್ತೆಯ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಬಳಿ ಕ್ಯಾಬ್​ವೊಂದನ್ನು ತಡೆದು ಪೊಲೀಸರು ತಪಾಸಣೆ ನಡೆಸುತ್ತಿದ್ದರು.ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ನಾಲ್ವರ ಕೈಯಲ್ಲಿ ಕ್ವಾರಂಟೈನ್​ ಸೀಲ್​ ಪತ್ತೆಯಾಗಿದೆ. ಇದನ್ನು ಕಂಡು ಗಾಬರಿಗೊಂಡ ಪೊಲೀಸರು ವಿಚಾರಣೆ ನಡೆಸಿದರು.

ನಾಲ್ವರು ಪಶ್ಚಿಮ‌ ಬಂಗಾಳದ ಪಶ್ಚಿಮ ಮೇದಿನಿಪುರದವರಾಗಿದ್ದು, ನಾರಾಯಣ ಆಸ್ಪತ್ರೆಯಿಂದ ‌ ಏರ್​ಪೋರ್ಟ್​ಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ನಾಲ್ವರೂ ಕ್ವಾರಂಟೈನ್​ ಸೀಲ್​ ಅನ್ನು ಅಳಿಸಿಹಾಕಿದ್ದು, ಅವರು ಬಂದ ದಿನಾಂಕ ಸ್ಪಷ್ಟವಾಗಿ ಕಂಡು ಬಂದಿಲ್ಲ. ಇನ್ನು, ಕಾರಿನಲ್ಲಿದ್ದ ನಾಲ್ವರೂ ಮಾಸ್ಕ್​ ಧರಿಸಿದ್ದು, ಚಾಲಕ ಮಾಸ್ಕ್​ ಧರಿಸದೇ ಕಾರು ಚಲಾಯಿಸುತ್ತಿದ್ದನು ಎಂದು ತಿಳಿದು ಬಂದಿದೆ‌.ಸದ್ಯ ಪೊಲೀಸರು ಈ ಕುರಿತು ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com