ಬೆಂಗಳೂರು: ಕೊರೋನಾ ಕ್ವಾರಂಟೈನ್ನಲ್ಲಿರಬೇಕಾದ ನಾಲ್ವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಬಳಿ ಸುಳಿದಾಡಿ ಆತಂಕ ಸೃಷ್ಟಿಸಿದ್ದಾರೆ
ಪ್ಯಾಲೇಸ್ ರಸ್ತೆಯ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಬಳಿ ಕ್ಯಾಬ್ವೊಂದನ್ನು ತಡೆದು ಪೊಲೀಸರು ತಪಾಸಣೆ ನಡೆಸುತ್ತಿದ್ದರು.ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ನಾಲ್ವರ ಕೈಯಲ್ಲಿ ಕ್ವಾರಂಟೈನ್ ಸೀಲ್ ಪತ್ತೆಯಾಗಿದೆ. ಇದನ್ನು ಕಂಡು ಗಾಬರಿಗೊಂಡ ಪೊಲೀಸರು ವಿಚಾರಣೆ ನಡೆಸಿದರು.
ನಾಲ್ವರು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದವರಾಗಿದ್ದು, ನಾರಾಯಣ ಆಸ್ಪತ್ರೆಯಿಂದ ಏರ್ಪೋರ್ಟ್ಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ನಾಲ್ವರೂ ಕ್ವಾರಂಟೈನ್ ಸೀಲ್ ಅನ್ನು ಅಳಿಸಿಹಾಕಿದ್ದು, ಅವರು ಬಂದ ದಿನಾಂಕ ಸ್ಪಷ್ಟವಾಗಿ ಕಂಡು ಬಂದಿಲ್ಲ. ಇನ್ನು, ಕಾರಿನಲ್ಲಿದ್ದ ನಾಲ್ವರೂ ಮಾಸ್ಕ್ ಧರಿಸಿದ್ದು, ಚಾಲಕ ಮಾಸ್ಕ್ ಧರಿಸದೇ ಕಾರು ಚಲಾಯಿಸುತ್ತಿದ್ದನು ಎಂದು ತಿಳಿದು ಬಂದಿದೆ.ಸದ್ಯ ಪೊಲೀಸರು ಈ ಕುರಿತು ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
Advertisement