ಬೆಂಗಳೂರು: ಕೊರೋನಾ ವೈರಸ್ ಭಯದಿಂದಾಗಿ ಎಲ್ಲಾ ರಾಜಕೀಯ ಪಕ್ಷಗಳ ಬಾಗಿಲು ಮುಚ್ಚಿವೆ, ಮಾರ್ಚ್ 31 ರ ವರೆಗೆ ಯಾವುದೇ ಕಾರ್ಯಕರ್ತರೂ ಪಕ್ಷದ ಕಚೇರಿಗೆ ಬರದಂತೆ ನಾಯಕರು ಮನವಿ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಒಬ್ಬ ಸಿಬ್ಬಂದಿಮೂರು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬರು ಮತ್ತೊಂದು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಾರೆ. ಮಲ್ಲೇಶ್ವರನಲ್ಲಿರುವ ಜಗನ್ನಾಥ ಭವನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ, ನೋಡಿಕೊಳ್ಳುತ್ತಿದ್ದಾರೆ.
ಯಾವುದೇ ಮಹತ್ವದ ಸಭೆಗಳನ್ನು ನಡೆಸುತ್ತಿಲ್ಲ, ತೀರಾ ತುರ್ತಿದ್ದರೇ ಮಾತ್ರ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಯಾವುದೇ ಸಚಿವರು ಪಕ್ಷದ ಕಚೇರಿಗೆ ಹಾಜರಾಗದಂತೆ ಸೂಚಿಸಲಾಗಿದೆ.
ಬಿಜೆಪಿಯಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಚೇರಿಗಳಲ್ಲಿಯೂ ಕಾರ್ಯಕರ್ತರು ಸೇರದಂತೆ ಸೂಚನೆ ನೀಡಲಾಗಿದೆ, ತಮ್ಮ ಕಚೇರಿಗೆ ಸದ್ಯ ಹೆಚ್ಚಿನ ಕಾರ್ಯಕರ್ತರು ಬರುತ್ತಿಲ್ಲ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.
Advertisement