ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.
ಮಾರಕ ವೈರಸ್ ನಿಂದ ನೂರಾರು ಜನರ ಜೀವ ಹಾಗೂ ಅವರ ಕುಟುಂಬ ವರ್ಗದವರ ಹಿತ ದೃಷ್ಟಿಯಿಂದ ನರೇಂದ್ರ ಮೋದಿ ಕರ್ಫ್ಯೂ ಮಾದರಿಯ ಅನಿವಾರ್ಯ ಲಾಕ್ ಡೌನ್ ನ್ನು ಜಾರಿಗೊಳಿಸಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಜನತೆ ಮನೆಯಲ್ಲೇ ಇರಬೇಕು ಎಂದಿದ್ದಾರೆ,
ಪ್ರಧಾನಮಂತ್ರಿ ಅವರು ನೀಡಿರುವ ಸೂಚನೆಗಳನ್ನು ರಾಜ್ಯದ ಆರೂವರೆ ಕೋಟಿ ಜನರು ಮುತುವರ್ಜಿಯಿಂದ ಪಾಲಿಸುವ ವಿಶ್ವಾಸವಿದೆ.ಯುಗಾದಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇದ್ದು ರೋಗ ಹರಡಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.
Advertisement