ಕ್ವಾರಂಟೈನ್ ನಲ್ಲಿದ್ದರೂ ಬೀದಿ ಸುತ್ತಲು ಬಂದವನಿಗೆ ಗ್ರಹಚಾರ ಬಿಡಿಸಿದ ಬೆಂಗಳೂರು ಪೊಲೀಸರು, ಕೇಸ್ ದಾಖಲು!

ಇಡೀ ದೇಶವೇ ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿದ್ದು, ಇದರ ನಡುವೆಯೇ ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಬೀದಿ ಸುತ್ತುತ್ತಿರುವುದನ್ನು ಗಮನಿಸಿದ ಬೆಂಗಳೂರು ಪೊಲೀಸರು ಅವನ ಗ್ರಹಚಾರ ಬಿಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಡೀ ದೇಶವೇ ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿದ್ದು, ಇದರ ನಡುವೆಯೇ ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಬೀದಿ ಸುತ್ತುತ್ತಿರುವುದನ್ನು ಗಮನಿಸಿದ ಬೆಂಗಳೂರು ಪೊಲೀಸರು ಅವನ ಗ್ರಹಚಾರ ಬಿಡಿಸಿದ್ದಾರೆ.

ಹೌದು..ಕೊರೋನಾ ವೈರಸ್ ಸೋಂಕು ಶಂಕಿತರಿಗೆ ಗೃಹ ದಿಗ್ಬಂಧನದಲ್ಲಿರಲು ಆದೇಶ ನೀಡಲಾಗಿದ್ದು, ಅವರು ಹೊರಗೆ ಬರಬಹುದು ಎಂಬ ಕಾರಣಕ್ಕೆ ಹೋಮ್​ ಕ್ವಾರಂಟೈನ್​ನಲ್ಲಿರುವವರ ಕೈ ಮೇಲೆ ಸೀಲ್ ಹಾಕಲಾಗಿದೆ. ಆದರೂ ಸೀಲ್ ಇರುವ ವ್ಯಕ್ತಿಗಳು ಹೊರಗೆ  ಓಡಾಡುತ್ತಿರುವುದರಿಂದ ಅಂಥವರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ಇದೇ ರೀತಿ ಕಳೆದ ಮಾರ್ಚ್ 17ರಂದು ಇಂಡೋನೇಷ್ಯಾದಿಂದ ಬಂದಿದ್ದ ವ್ಯಕ್ತಿಯೋರ್ವ ಬೆಂಗಳೂರಿನ ಥಣಿಸಂದ್ರದಿಂದ ಜಾಲಹಳ್ಳಿ ಕಡೆಗೆ ಬೈಕ್​ನಲ್ಲಿ ಬಂದಿದ್ದ. ಕೈ ಮೇಲಿರುವ ಸೀಲನ್ನು ಗಮನಿಸಿದ ಪೊಲೀಸರು  ಕೂಡಲೇ ಅವನನ್ನು ತಡೆದಿದ್ದಾರೆ. ಈ ವೇಳೆ ಆತ ಬೆಂಗಳೂರು ನೋಡಬೇಕೆಂದು ಹೊರಗೆ ರೌಂಡ್ಸ್​ ಗೆ ಬಂದಿದ್ದೇನೆ ಎಂದು ಅಸಡ್ಡೆಯಿಂದ ಉತ್ತರ ನೀಡಿದ್ದಾನೆ. ಇದರಿಂದ ಕೆಂಡಾ ಮಂಡಲರಾದ ಪೊಲೀಸರು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಲ್ಲದೆ ಗೃಹ ಬಂಧನದಲ್ಲಿರದೇ ಬೇಜವಾಬ್ದಾರಿ ವರ್ತನೆ ತೋರಿದ್ದರಿಂದ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಕೇಸ್ ಕೂಡ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 269, 271 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಆತನನ್ನು ಸಮೀಪದ ಆಕಾಶ್ ಆಸ್ಪತ್ರೆಯ ಸರ್ಕಾರಿ  ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com