ಬಂಡಿಪುರ ಮೀಸಲು ಅರಣ್ಯದಲ್ಲಿ  ನಾಲ್ವರು ಕಳ್ಳ ಬೇಟೆಗಾರರ ಬಂಧನ 

ಬಂಡೀಪುರ ಮೀಸಲು ಅರಣ್ಯದಲ್ಲಿ ನಾಲ್ವರು ಕಳ್ಳ ಬೇಟೆಗಾರರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಬಳಿಯಿದ್ದ ಆಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಂಡೀಪುರ ಮೀಸಲು ಅರಣ್ಯದಲ್ಲಿ ನಾಲ್ವರು ಕಳ್ಳ ಬೇಟೆಗಾರರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಬಳಿಯಿದ್ದ ಆಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ.

ಶುಕ್ರವಾರ ನಾನು ಕ್ಯಾಮೆರಾ ಮೂಲಕ ಚಿತ್ರಗಳನ್ನು ಸೆರೆ ಹಿಡಿಯಲು ಹೋಗುತ್ತಿದ್ದೆ, ಈ ವೇಳೆ ಕೆಲವರು ಗನ್ ಹಿಡಿದು ಹೋಗುತ್ತಿರುವುದು ಕಂಡು ಬಂತು,  ನಾನು ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಜೊತೆ ಆ ಸ್ಥಳಕ್ಕೆ ತಲುಪಿದೆ,ನಾಲ್ವರನ್ನು ಬಂಧಿಸಿದ್ದು ಪರಾರಿಯಾಗಿರುವ ಐದನೇ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ವೆಂಕಟೇಗೌಡ, ಮಹಾದೇವಪ್ಪ, ಪುಟ್ಟಸ್ವಾಮಿ ನಾಯಕ, ಮತ್ತು ಗಣೇಶನನ್ನು ಬಂಧಿಸಿರುವ ಅಧಿಕಾರಿಗಳು ಅವರನ್ನು ನ್ಯಾಯಾಂಗ ಬಂದನಕ್ಕೆ ನೀಡಿದ್ದಾರೆ, ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಮಾಚಿ ವೆಂಕಟನಿಗಾಗಿ  ಹುಡುಕಾಟ ನಡೆಸುತ್ತಿದ್ದಾರೆ. ಪ್ರಾಣಿಗಳ ಬೇಟೆಗಾಗಿ ಕಾಡಿಗೆ ಬಂದಿದ್ದಾಗಿ ಆರೋಪಿಗಳು  ತಪ್ಪೊಪ್ಪಿಕೊಂಡರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.  ಇದೇ ಮೊದಲ ಬಾರಿ ಕಾಡಿಗೆ ಬಂದಿದ್ದಾಗಿ ತಿಳಿಸಿದ್ದಾರೆ.

ಬಂಡಿಪುರ ಅರಣ್ಯ ವಲಯದಲ್ಲಿ ಸಿಕ್ಕಿಕೊಂಡ ಮೊದಲ ಕಳ್ಳ ಬೇಟೆಗಾರರು ಇವರಾಗಿದ್ದಾರೆ,  ಲಾಕ್ ಡೌನ್ ದುರುಪಯೋಗ ಪಡಿಸಿಕೊಂಡ ಆರೋಪಿಗಳು ಕಳ್ಳ ಬೇಟೆಗಾಗಿ ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com