ಬೆಂಗಳೂರು: ರಾಜ್ಯದ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಬಾಡಿಗೆ ವಾಹನ ಸೇವೆ ನೀಡುವ ಉಬರ್ ಕಂಪನಿ ಮೇ 4ರಿಂದ ತನ್ನ ಸೇವೆ ಪುನರಾರಂಭಿಸಲಿದೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಉಬರ್ ಸೇವೆಯನ್ನು ಆರೋಗ್ಯಸೇವಾ ಕಾರ್ಯಕರ್ತರು ಮತ್ತು ಅಗತ್ಯ ಸೇವೆ ನೀಡುವ ಸಿಬ್ಬಂದಿಗೆ ಮಾತ್ರ ಪೂರೈಸಲಾಗುತ್ತಿತ್ತು. ಇನ್ನು ಮುಂದೆ ಕಿತ್ತಳೆ ಮತ್ತು ಹಸಿರುವ ವಲಯದಲ್ಲಿ ಈ ಮೊದಲಿನಂತೆ ಸಾರ್ವಜನಿಕರ ಸೇವೆಗೆ ವಾಹನಗಳು ಲಭ್ಯವಾಗಲಿವೆ ಎಂದು ಕಂಪನಿಯ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಊಬರ್ ಕಾರ್ನಲ್ಲಿ ಒಮ್ಮೆಗೆ ಚಾಲಕ ಹೊರತುಪಡಿಸಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಮುಂದಿನ ಸೀಟಿನಲ್ಲಿ ಅಂದರೆ ಚಾಲಕನ ಪಕ್ಕದಲ್ಲಿ ಯಾರಿಗೂ ಕುಳಿತುಕೊಳ್ಳಲು ಅವಕಾಶವಿಲ್ಲ ಎಂದು ಅದು ತಿಳಿಸಿದೆ.
Advertisement