ಬೆಳಗಾವಿ: ದ್ವಿಚಕ್ರ ವಾಹನ ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಯೋಧರೊಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌದತ್ತಿ ಸಮೀಪ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಅಂಕಲಿ ಗ್ರಾಮದ ಯೋಧ ಅಜೀತ್ ಬಂಡು ಕೊರವಿ(೨೮) ಅಪಘಾತದಲ್ಲಿ ಮೃತಪಟ್ಟಿದ್ದು, ಪ್ರದೀಪ ಕೊರವಿ ಎಂಬುವವರು ಗಾಯಗೊಂಡಿದ್ದಾರೆ.
ಬಾವನ ಸೌದತ್ತಿ ಗ್ರಾಮದಿಂದ ಅಂಕಲಿ ಗ್ರಾಮದ ಕಡೆ ಹೊರಡುವಾಗ ಎರಡು ವಾಹನಗಳು ಮುಖಾಮುಕಿ ಡಿಕ್ಕಿಯಾಗಿದ್ದರಿಂದ ಈ ಅಪಘಾತ ಸಂಭವಿಸಿದೆ.
ಇನ್ನೂ ಯೋಧ ಅಜೀತ ಅವರು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ಪರಿಶೀಲಿಸಿದ್ದು, ಬುಲೆರೋ ವಾಹನ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement