ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸಪೇಟೆ: ಪತ್ನಿಯ ಶೀಲ ಶಂಕಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

ಪತ್ನಿಯ ಶೀಲ ಶಂಕಿಸಿದ ಕಿರಾತಕ ಪತಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಿನ್ನೆ ರಾತ್ರಿ  ನಡೆದಿದೆ. ರುಂಡ ಮುಂಡ ಬೇರ್ಪಡಿಸಿ ವಿಕೃತವಾಗಿ ಆರೋಪಿ ಕೊಲೆ ಮಾಡಿದ್ದಾನೆ. 

ಹೊಸಪೇಟೆ: ಪತ್ನಿಯ ಶೀಲ ಶಂಕಿಸಿದ ಕಿರಾತಕ ಪತಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಿನ್ನೆ ರಾತ್ರಿ  ನಡೆದಿದೆ. ರುಂಡ ಮುಂಡ ಬೇರ್ಪಡಿಸಿ ವಿಕೃತವಾಗಿ ಆರೋಪಿ ಕೊಲೆ ಮಾಡಿದ್ದಾನೆ. 

ಲಲಿತ 30ವರ್ಷ ಕೊಲೆಯಾದ ಮಹಿಳೆ.ಲಲಿತ ಹಾಗೂ ಅಣ್ಣಪ್ಪ  ಕಳೆದ 14 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಸಂಸಾರದಲ್ಲಿ ಬಿರುಕು ಎದ್ದಿತ್ತು.  ಗಂಡ ಹೆಂಡತಿ ಇಬ್ಬರನ್ನ ಒಂದೆಡೆ ಸೇರಿಸಿ ರಾಜಿ ಪಂಚಾಯ್ತಿ ಮಾಡಿ ಸ್ಥಳೀಯರು ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. 

ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಟಿ.ಬಿ.ಡ್ಯಾಂ ಪ್ರದೇಶದ ಪಿ.ಎಲ್.ಸಿ.ಕ್ಯಾಂಪ್ ಬಳಿಯ ಜಮೀನಿನಲ್ಲಿ ಮೃತ ದೇಹ ಪತ್ತೆಯಾಗಿತ್ತು. ಹೆಂಡತಿಯನ್ನ ಕೊಲೆಮಾಡಿ ತನ್ನ ಮೂರು ಜನ ಮಕ್ಕಳೊಂದಿಗೆ ಅಣ್ಣಪ್ಪ ಪರಾರಿಯಾಗಿದ್ದಾನೆ. 

ಪರಾರಿಯಾಗಿರುವ ಕೊಲೆ ಆರೋಪಿಯ ಪತ್ತೆಗೆ ಹೊಸಪೇಟೆ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com