ಮಡಿಕೇರಿ: ಇಲ್ಲಿನ ಒಣಚಲು ಎಂಬಲ್ಲಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬ್ರೆಜಿಲ್ ಪ್ರಜೆಯೊಬ್ಬನನ್ನು ಶನಿವಾರ ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ವಿದೇಶಿ ಪ್ರಜೆಯೊಬ್ಬ ಬಸ್ ನಿಲ್ದಾಣದಲ್ಲಿ ಇರುವುದಾಗಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು ಬ್ರೆಜಿಲ್ ಪ್ರಜೆಯನ್ನು ಕ್ವಾರಂಟೈನ್ಗೆ ಕಳುಹಿಸಿದ್ದಾರೆ.
ಒಂದು ವರ್ಷದ ಹಿಂದೆ ಭಾರತಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಇಲ್ಲಿನ ಬೈಲಕುಪ್ಪೆಯ ಟಿಬೆಟಿಯನ್ ಕ್ಯಾಂಪ್ನಲ್ಲಿ ಇದ್ದುದಾಗಿ ತಿಳಿಸಿದ್ದಾರೆ.
ಕೊವಿಡ್-೧೯: ಕೊಡಗಿನಲ್ಲಿ ಬ್ರಿಟನ್ ಪ್ರಜೆ ಕ್ವಾರಂಟೈನ್
ಕೊಡಗು ಜಿಲ್ಲೆಯ ಒಣಚಲು ಗ್ರಾಮದ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಕಂಡುಬಂದಿದ್ದ ಬ್ರಿಟನ್ ಪ್ರಜೆಯನ್ನು ಕ್ವಾರಂಟೈನ್ ಗಾಗಿ ಆರೋಗ್ಯಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಬ್ರಿಟನ್ ಪ್ರಜೆ ಬಸ್ ನಿಲ್ದಾಣದಲ್ಲಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
Advertisement