ಮಂಗಳೂರಿಗೆ ಮಸ್ಕತ್ ನಿಂದ ಆಗಮಿಸಿದ ವಿಮಾನ: 178 ಪ್ರಯಾಣಿಕರು ತಾಯ್ನಾಡಿಗೆ 

ಕೊರೋನಾ ಸೋಂಕಿನಿಂದ ಹಲವು ದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಅನಿವಾಸಿ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ಆರಂಭಿಸಿರುವ ವಂದೇ ಭಾರತ ಅಭಿಯಾನದಡಿ ಮೂರನೇ ವಿಮಾನ ಮಸ್ಕತ್ ನಿಂದ ಆಗಮಿಸಿದೆ. 
ಮಂಗಳೂರಿಗೆ ಮಸ್ಕತ್ ನಿಂದ ಆಗಮಿಸಿದ ವಿಮಾನ: 178 ಪ್ರಯಾಣಿಕರು ತಾಯ್ನಾಡಿಗೆ 

ಬೆಂಗಳೂರು: ಕೊರೋನಾ ಸೋಂಕಿನಿಂದ ಹಲವು ದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಅನಿವಾಸಿ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ಆರಂಭಿಸಿರುವ ವಂದೇ ಭಾರತ ಅಭಿಯಾನದಡಿ ಮೂರನೇ ವಿಮಾನ ಮಸ್ಕತ್ ನಿಂದ ಆಗಮಿಸಿದೆ.

ಈ ಮಧ್ಯೆ ಇದೇ 25 ರಿಂದ ದೇಶೀಯ ವಿಮಾನಗಳು ಸಹ ಸಂಚಾರ ಆರಂಭವಾಗಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಈ ರಾತ್ರಿ ಆಗಮಿಸಿದ ಈ ವಿಮಾನದಲ್ಲಿ ಒಟ್ಟು ೧೭೮ ಪ್ರಯಾಣಿಕರಿದ್ದರು. ಇವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ೧೧೫ ಮಂದಿ ಬೆಂಗಳೂರು ನಿಲ್ದಾಣದಲ್ಲಿ ಇಳಿದಿದ್ದು, ಇವರೆಲ್ಲರನ್ನೂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com