ಕಾರು ರಿವರ್ಸ್ ಮಾಡುವಾಗ ಅವಘಡ: ತಂದೆಯಿಂದಲೇ ಕಂದಮ್ಮ ಸಾವು

ಕಾರು ರಿವರ್ಸ್​ ಮಾಡುವಾಗ ಮಗುವಿಗೆ ಕಾರು ಡಿಕ್ಕಿಯಾಗಿದ್ದು, ಪರಿಣಾಮ ಮಗು ಸಾವನ್ನಪ್ಪಿದೆ. ಈ ಘಟನೆ ಚಾಮರಾಜನಗರದ ಚಿಕ್ಕಹೊಳೆ ಬಳಿಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಕಾರು ರಿವರ್ಸ್​ ಮಾಡುವಾಗ ಮಗುವಿಗೆ ಕಾರು ಡಿಕ್ಕಿಯಾಗಿದ್ದು, ಪರಿಣಾಮ ಮಗು ಸಾವನ್ನಪ್ಪಿದೆ. ಈ ಘಟನೆ ಚಾಮರಾಜನಗರದ ಚಿಕ್ಕಹೊಳೆ ಬಳಿಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ರೋಹಿತ್(1) ಮೃತಪಟ್ಟ ಕಂದಮ್ಮ. ತಂದೆ ಶಕ್ತಿವೇಲು ಹೊರಗಡೆ ಹೋಗಲು ಶೆಡ್​ನಿಂದ ಕಾರು ತೆಗೆಯುವ ವೇಳೆ ಮಗು ಅಪ್ಪನನ್ನು ಹಿಂಬಾಲಿಸಿದೆ. ಮಗುವನ್ನು ಗಮನಿಸದ ತಂದೆ ರಿವರ್ಸ್ ತೆಗೆದಾಗ ಕಾರು ಗುದ್ದಿದ ರಭಸಕ್ಕೆ ಮಗು ತೀವ್ರ ಅಸ್ವಸ್ಥಗೊಂಡಿದೆ. 

ಕೂಡಲೇ ಮಗುವನ್ನು ತಾಳವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಸದ್ಯ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಮಗುವಿನ ಮೃತದೇಹ ರವಾನಿಸಿದ್ದಾರೆ.

ವರದಿ: ಗುಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com