ತವರಿಗೆ ತೆರಳಿದ ವಲಸೆ ಕಾರ್ಮಿಕರು: ನಿರ್ಮಾಣ ವೆಚ್ಚದಲ್ಲಿ ಹೆಚ್ಚಳ; ಆತಂಕದಲ್ಲಿ ಬಿಲ್ಡರ್ಸ್

ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದಂತೆ, ಹೆಚ್ಚಾಗಿ ಉತ್ತರ ಭಾರತದಲ್ಲಿ ನಿರ್ಮಾಣ ಯೋಜನೆಗಳಿಗೆ ಅಡ್ಡಿಯಾಗಿದ್ದು ವೆಚ್ಚವನ್ನು ಹೆಚ್ಚಿಸಿದೆ.
ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು

ಬೆಂಗಳೂರು: ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದಂತೆ, ಹೆಚ್ಚಾಗಿ ಉತ್ತರ ಭಾರತದಲ್ಲಿ ನಿರ್ಮಾಣ ಯೋಜನೆಗಳಿಗೆ ಅಡ್ಡಿಯಾಗಿದ್ದು ವೆಚ್ಚವನ್ನು ಹೆಚ್ಚಿಸಿದೆ.

ಹೆಚ್ಚಾಗಿ ಬಿಹಾರ, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಿಂದ ಸಾವಿರಾರು ವಲಸಿಗರನ್ನು ಕರ್ನಾಟಕದಲ್ಲಿ ಬಿಲ್ಡರ್‌ಗಳು ಕೆಲಸಕ್ಕಾಗಿ ನೇಮಿಸಿಕೊಂಡಿದ್ದರು. 

ಇದರಲ್ಲಿ ಟೈಲ್ಸ್, ಮರಗೆಲಸ ಮತ್ತು ಇಂಟಿರೀಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಘದ ಅಧ್ಯಕ್ಷ ಸುರೇಶ್ ಹರಿ ಹೇಳಿದ್ದಾರೆ.

ಬೇರೆ ಕೆಲಸಗಳಿಗೆ ನಾವು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳುತ್ತೇವೆ, ಅಂತಿಮ ಹಂತದ ಕೆಲಸಕ್ಕೆ ಮಾತ್ರ ಹೊರ ರಾಜ್ಯದ ಕೌಶಲ್ಯಯುತ ಕೆಲಸಗಾರರು ಬರುತ್ತಾರೆ.  ಇವರಲ್ಲಿ ಹಲವರು ತಮ್ಮ ಊರುಗಳಿಗೆ ತೆರಳಿದ್ದಾರೆ, ಯಾವಾಗ ವಾಪಸ್ ಬರುತ್ತಾರೋ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಲಸ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ, ಕಾರ್ಮಿಕರ ವೆಚ್ಚ ಹಾಗೂ ಸಾಲದ ಮೇಲಿನ ಬಡ್ಡಿಯಲ್ಲಿ ಹೆಚ್ಚಳವಾಗುತ್ತಿದೆ, ಇದು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಸುಮಾರು ಶೇ. 10-15ರಷ್ಟು ಬೆಲೆ ಏರಿಕೆಯಾಗಲಿದೆ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಕಡಿವಾಣ ಹಾಕಲು ಶೀಘ್ರವೇ ರೇರಾ ಉಪ ಸಮಿತಿ ರಚಿಸಲಾಗುವುದು ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದ್ದಾರೆ. ಸಾವಿರಾರು ವಲಸೆ ಕಾರ್ಮಿಕರು ಬೆಂಗಳೂರಿನಲ್ಲಿದ್ದಾಗ ಈ ಬಿಲ್ಡರ್ ಗಳು ಅವರ ರಕ್ಷಣೆಗೆ ಬರಲಿಲ್ಲ, ಹಾಗಾಗಿ ಅವರು ತಮ್ಮ ತವರಿಗೆ ತೆರಳಿದರು, ಹೀಗಾಗಿ ಅವರು ವೆಚ್ಚ ಹೆಚ್ಚಿಸಲುಸಾಧ್ಯವಿಲ್ಲ, ಜನರ ಮೇಲೆ ಹೊರೆ ಹೆಚ್ಚಿಸಲು ಬಿಲ್ಡರ್ಸ್ ಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರಿಂದ ಸರ್ಕಾರದ ಕೆಲಸಗಳ ಮೇಲೆ ಪರಿಣಾಮ
ಬೀರಲಿದೆ.

“ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಒಳಗೊಂಡ ಕರ್ನಾಟಕದಲ್ಲಿ 30,000 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುತ್ತಿಗೆದಾರರು ಅನೇಕ ವಲಸಿಗರನ್ನು ನೇಮಿಸಿಕೊಂಡಿದ್ದರು, ಈಗ ಅವರು ವಾಪಸ್ ಹೋಗಿರುವುದರಿಂದ ಕೆಲಸ ಮತ್ತಷ್ಟು ವಿಳಂಬವಾಗುತ್ತದೆ, ’’ ಎಂದು ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com