ಬೆಂಗಳೂರು: ನಗರದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
30 ವರ್ಷದ ಸುಭಾನ್ ಕೊಲೆಯಾಗಿದ್ದು, ಅನೈತಿಕ ಸಂಬಂಧದಿಂದ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಶನಿವಾರ ಮಧ್ಯಾಹ್ನ ಡಿಜೆ ಹಳ್ಳಿಯ ಶ್ಯಾಂಪುರ ರೈಲ್ವೇ ಗೇಟ್ ಬಳಿ ಈತನನ್ನುಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿತ್ತು. ರಕ್ತಸಿಕ್ತವಾಗಿದ್ದ ದೇಹವೊಂದು ಗಟಾರದಲ್ಲಿ ಬಿದ್ದಿತ್ತು. ಇದನ್ನು ನೋಡಿದ ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆದರೆ ಪೋಲೀಸರ ತನಿಖೆ ನಡೆಸಿದಾಗ ಇದು ರೈಲ್ವೇ ಗೇಟ್ ಬಳಿ ನಡೆದ ಕೊಲೆಯಲ್ಲ, ಬೇರೆಡೆ ಕೊಲೆ ಮಾಡಿ ಇಲ್ಲಿಗೆ ತಂದು ಹಾಕಲಾಗಿದೆ ಎಂದು ಶಂಕೆ ಬಂದಿದೆ.
ಮೃತ ಸುಭಾನ್ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರದಲ್ಲಿ ಸೈಯದ್ ಎಂಬುವವನೊಡನೆ ಗಲಾಟೆ ನಡೆದಿದೆ. ಇದೇ ವಿಚಾರ ಕೊಲೆಗೆ ಕಾರಣವಾಗಿದೆ ಎಂದು ಪೋಲೀಸರು ಶಂಕಿಸಿದ್ದು ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Advertisement