ಮಂಗಳೂರು: ಲಾರಿಗೆ ಕಾರು ಢಿಕ್ಕಿ, ಓರ್ವ ಸಾವು, ಐವರಿಗೆ ಗಾಯ

ಮೇ 31 ರ ಭಾನುವಾರ ನಸುಕಿನ ಜಾವ ಇಲ್ಲಿನ ಕಳ್ಳಪು ಸಮೀಪದ ಸೇತುವೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ ಐದು ಮಂದಿ ಗಾಯಗೊಂಡಿದ್ದಾರೆ.
ಕಾರು ಅಪಘಾತದ ದೃಶ್ಯ
ಕಾರು ಅಪಘಾತದ ದೃಶ್ಯ

ಮಂಗಳುರು: ಮೇ 31 ರ ಭಾನುವಾರ ನಸುಕಿನ ಜಾವ ಇಲ್ಲಿನ ಕಳ್ಳಪು ಸಮೀಪದ ಸೇತುವೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ ಐದು ಮಂದಿ ಗಾಯಗೊಂಡಿದ್ದಾರೆ.

ಮೃತನನ್ನು ಕಾವೂರು ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ.

ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಚೇತನ್ ಕಾರನ್ನು ಓಡಿಸುತ್ತಿದ್ದನೆಂದು ತಿಳಿದುಬಂದಿದೆ. ಆಗ ಹಿಂದಿನಿಂದ ಕಾರು ಆಗಮಿಸಿ ಲಾರಿಗೆ ಗಿದ್ದಿದೆ. 

ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com