ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಅಳಿಯ ವಿಜಯ್ ಹೀರೇಮಠ್ ಅವರಿಗೆ ಟ್ರಾಫಿಕ್ ಪೊಲೀಸರೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿ ತಾವು ಕಾರು ಚಲಾಯಿಸಿದ ವೇಳೆ ಸಿಗ್ನಲ್ ಜಂಪ್ ಮಾಡಿದೆ, ನಂತ್ರ ಪೇದೆಯೊಬ್ಬರು ಬಂದು ನನ್ನನ್ನು ನಿಲ್ಲಿಸಿದರು. ನಂತರ ಸಿಗ್ನಲ್ ಜಂಪ್ ಮಾಡಿದ್ದಕ್ಕೆ ದಂಡ ಕೇಳಿದರು.
ಸಂಚಾರ ಪೊಲೀಸ್ ಜಂಟಿ ಆಯುಕ್ತರು ಮತ್ತು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಹರೇ ಕೃಷ್ಣ ಜಂಕ್ಷನ್ನಲ್ಲಿ ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ, ನಾನು ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಪೇದೆ ಲಂಚ
ನೀಡುವಂತೆ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಿದ್ದಾರೆ.
ನಾನು ಲಂಚ ಕೊಡಲು ಸಮ್ಮತಿಸಿಲ್ಲ, ನನ್ನ ಬಳಿ ವಿಡಿಯೋ ದಾಖಲೆ ಇದೆ, ನನ್ನ ಫೋನ್ ಪ್ರಮುಖ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ನಮ್ಮ ಪೇದೆ ದಂಡ ವಿಧಿಸಿದ್ದಾರೆ, ಅದಕ್ಕೆ ರಸೀದಿ ಕೂಡ ನೀಡಿದ್ದಾರೆ, ಆದರೆ ಹೀರೆಮಠ್ ದಂಡ ಪಾವತಿಸಿದೇ ತೆರಳಿದ್ದಾರೆ ಎಂದು ಹೈಗ್ರೌಂಡ್ ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement