ಉಡುಪಿ: ಸಿಎಂ ಬಿಎಸ್‌ವೈ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ತೆರೆದವನ ವಿರುದ್ಧ ದೂರು ದಾಖಲು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವರ ಹೆಸರಿನಲ್ಲಿ ನಕಲಿ ಈ-ಮೇಲ್ ಖಾತೆ ತೆರೆದ ದುಷ್ಕರ್ಮಿಯ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಲಾಗಿದೆ.
ಉಡುಪಿ: ಸಿಎಂ ಬಿಎಸ್‌ವೈ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ತೆರೆದವನ ವಿರುದ್ಧ ದೂರು ದಾಖಲು

ಉಡುಪಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವರ ಹೆಸರಿನಲ್ಲಿ ನಕಲಿ ಈ-ಮೇಲ್ ಖಾತೆ ತೆರೆದ ದುಷ್ಕರ್ಮಿಯ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬ cm@karnataka.gov.in ಹೆಸರಿನಿಂದ ಖಾತೆ ತೆರೆದು ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಡೈರೆಕ್ಟರ್ ಹಾಗೂ ರಿಜಿಸ್ಟಾರ್ ಆದ ಡಾ.ನಾರಾಯಣ್ ಸಭಾಹಿತ್ ಅವರಿಗೆ ಈ-ಮೇಲ್ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರ ಪ್ರಕಾರ ಮೇಲ್ ನಲ್ಲಿ ಹೀಗಿದೆ- “ಕಾಲೇಜುಗಳನ್ನು ಪುನಃ ತೆರೆಯುವ ಮಾಹೆ ಯೋಜನೆಗೆ ಸಂಬಂಧಿಸಿದಂತೆ ನಾಡಿನಾದ್ಯಂತಪೋಷಕರು ಮತ್ತು ವಿದ್ಯಾರ್ಥಿಗಳಿಂದ ಬಂದ ದೂರುಗಳಿಗೆ ಸಂಬಂಧಿಸಿದಂತೆ ನಾವು ಹಲವಾರು ಇಮೇಲ್‌ಗಳನ್ನು ಸ್ವೀಕರಿಸಿದ್ದೇವೆ. ಈಗಿನ ಪರಿಸ್ಥಿತಿ ನವೆಂಬರ್ / ಡಿಸೆಂಬರ್-2020 ರಲ್ಲಿ ಕಾಲೇಜುಗಳನ್ನು ತೆರೆಯಲು ಸೂಕ್ತವಲ್ಲ. 2 ನೇ ಜನವರಿ-2021 ರಂದು ಅಥವಾ ಅದಕ್ಕೂ ಮೊದಲು ಯಾವುದೇ ಕಾಲೇಜುಗಳನ್ನು ತೆರೆಯಲು ಅನುಮತಿ ಇಲ್ಲ ಎಂದು ಮಾಹೆ ಆಡಳಿತ ಮಂಡಳಿಗೆ ಅರಿವು ಮೂಡಿಸುವುದು ಈ ಮೇಲ್ ಉದ್ದೇಶವಾಗಿದೆ. ಅಲ್ಲದೆ 2 ನೇ ಜನವರಿ-2021 ರ ನಂತರ ಸಹ, ನೀವು ಕಾಲೇಜುಗಳನ್ನು ಮತ್ತೆ ತೆರೆಯಲು ಯೋಜಿಸುತ್ತಿದ್ದರೆ, ನೀವು ಪೋಷಕರ ಒಪ್ಪಿಗೆ ಪಡೆಯಬೇಕು .

ನಕಲಿ ಈ-ಮೇಲ್ ಐಡಿ ರಚಿಸಿದವನನ್ನು ಪತ್ತೆ ಹಚ್ಚಿಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೈಬರ್ ಪೊಲೀಸರಿಗೆ ದೂರುದಾರ ಡಾ.ನಾರಾಯಣ್ ಸಭಾಹಿತ್ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com