ಆಶುಕವಿತೆಗಳಿಂದ ಹೆಸರಾದ ಹಿರಿಯ ಕವಿ ಡಾ‌. ವಿ.ಸಿ. ಐರಸಂಗ ನಿಧನ

ಆಶುಕವಿತೆಗಳಿಂದ ಹೆಸರಾದ ಹಿರಿಯ ಕವಿ ಡಾ‌. ವಿ. ‌ಸಿ. ಐರಸಂಗ (91) ನಿಧನವಾಗಿದ್ದಾರೆ. 
ಡಾ‌. ವಿ. ‌ಸಿ. ಐರಸಂಗ
ಡಾ‌. ವಿ. ‌ಸಿ. ಐರಸಂಗ

ಧಾರವಾಡ: ಆಶುಕವಿತೆಗಳಿಂದ ಹೆಸರಾದ ಹಿರಿಯ ಕವಿ ಡಾ‌. ವಿ. ‌ಸಿ. ಐರಸಂಗ (91) ನಿಧನವಾಗಿದ್ದಾರೆ. 

ಹಲವು ದಿನಗಳಿಂದ ನಾರೋಗ್ಯಕ್ಕೀಡಾಗಿದ್ದ ಐರಸಂಗ ಅವರನ್ನು ಜರ್ಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ.

ಆಶುಕವಿತೆಗಳನ್ನು ಪ್ಯಾಕೇಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ಸೈಕಲ್ ಮೇಲಿಟ್ಟು ಮಾರುತ್ತಿದ್ದ ಇವರ ಕವಿತೆಗಳನ್ನು ಧಾರವಾಡ ಆಕಾಶವಾಣಿ ಆಗಾಗ ಪ್ರಸಾರ ಮಾಡುತ್ತಿತ್ತು.

ಮಲ್ಲಕಂಬಪಟುವಾಗಿದ್ದ ಐರಸಂಗ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.

ಮೃತರ ಅಂತ್ಯಕ್ರಿಯೆ ಧಾರವಾಡದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಇಂದು ಬೆಳಿಗ್ಗೆ ೧೧.೩೦ಕ್ಕೆ ನಡೆಯುವುದಾಗಿ ಕುಟುಂಬ ಮೂಲಗಳು ಹೇಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com