ಕೇಂದ್ರ ಸಚಿವೆಯರಿಗೆ ಅಚ್ಚರಿಯ ಉಡುಗೊರೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಹಾಗೂ ಇತರೆ ಉನ್ನತ ನಾಯಕರಿಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಉಡುಗೊರೋ ನೀಡಿದ್ದಾರೆ. 
ಉಡುಪಿ ಸೀರೆಗಳನ್ನು ಖರೀದಿಸಿರುವ ಸಂಸದೆ ಶೋಭಾ
ಉಡುಪಿ ಸೀರೆಗಳನ್ನು ಖರೀದಿಸಿರುವ ಸಂಸದೆ ಶೋಭಾ

ಬೆಂಗಳೂರು: ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಹಾಗೂ ಇತರೆ ಉನ್ನತ ನಾಯಕರಿಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಉಡುಗೊರೋ ನೀಡಿದ್ದಾರೆ. 

ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಮನೇಕಾ ಗಾಂಧಿ, ಶೆಫಾಲಿ ವೈದ್ಯ, ದೇಬಶ್ರೀ, ಮೀನಾಕ್ಷಿ ಲೆಖಿ, ವನತಿ, ಡಿಎಂಕೆ ಕನಿಮೋಳಿ ಸೇರಿದಂತೆ ಹಲವರಿಗೆ ಉಡುಪಿ ಸೀರೆಗಳನ್ನು ಶೋಭಾ ಅವರು ಉಡುಗೊರೆಯಾಗಿ ನೀಡಿದ್ದಾರೆ. 

ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯವಾಗಿ ಉಡುಪಿ ಸೀರೆಗಳನ್ನು ಖರೀದಿಸಿರುವ ಶೋಭಾ ಅವರು ಬಿಜೆಪಿ ನಾಯಕರಿಗೆ ಉಡುಗೊರೆ ನೀಡು ಶುಭಕೋರಿದ್ದಾರೆ. ಈ ಮೂಲಕ ಉಡುಪಿ ಕೈಮಗ್ಗವನ್ನು ರಾಷ್ಟ್ರಮಟ್ಟದ ನಾಯಕರಿಗೂ ಮತ್ತೊಮ್ಮೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಶೋಭಾ ಅವರು ನೀಡಿರುವ ಉಡುಗೊರೆ ಕುರಿತು ಟ್ವೀಟ್ ಮಾಡಿಸುವ ಶೆಫಾಲಿ ವೈದ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com