ರಾಮನಗರ: ಮದುವೆಗೆ ತೆರಳುತ್ತಿದ್ದ ತಾಯಿ, ಮಗಳ ಚಿನ್ನಾಭರಣ ಕಳವು

ತಾಯಿ, ಮಗಳು ಹೋಗುತ್ತಿದ್ದ ಸ್ಕೂಟರ್ ಗೆ ಬೈಕ್ ನಿಂದ ಗುದ್ದಿದ ಇಬ್ಬರು ದುಷ್ಕರ್ಮಿಗಳು ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಮನಗರ: ತಾಯಿ, ಮಗಳು ಹೋಗುತ್ತಿದ್ದ ಸ್ಕೂಟರ್ ಗೆ ಬೈಕ್ ನಿಂದ ಗುದ್ದಿದ ಇಬ್ಬರು ದುಷ್ಕರ್ಮಿಗಳು ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ನಡೆದಿದೆ.

ಗೌರಮ್ಮ ಹಾಗೂ ಅವರ ಪುತ್ರಿ ರಶ್ಮಿ ಹೋಂಡಾ ಆಕ್ಟೀವಾದಲ್ಲಿ ಸಂಬಂಧಿಕರ ಮದುವೆಗೆಂದು ಹೊನ್ನಿಗಾನಹಳ್ಳಿಗೆ ಪ್ರಯಾಣ ಬೆಳೆಸಿದ್ದರು.

ಈ ವೇಳೆ ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆಸಿದ ಇಬ್ಬರು  ದುಷ್ಕರ್ಮಿಗಳು 55 ಗ್ರಾಂ ಮಾಂಗಲ್ಯ ಸರ, ನೆಕ್ಲೆಸ್ ಹಾಗೂ ಲಾಂಗ್ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com