ರಾಮನಗರ: ತಾಯಿ, ಮಗಳು ಹೋಗುತ್ತಿದ್ದ ಸ್ಕೂಟರ್ ಗೆ ಬೈಕ್ ನಿಂದ ಗುದ್ದಿದ ಇಬ್ಬರು ದುಷ್ಕರ್ಮಿಗಳು ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗೌರಮ್ಮ ಹಾಗೂ ಅವರ ಪುತ್ರಿ ರಶ್ಮಿ ಹೋಂಡಾ ಆಕ್ಟೀವಾದಲ್ಲಿ ಸಂಬಂಧಿಕರ ಮದುವೆಗೆಂದು ಹೊನ್ನಿಗಾನಹಳ್ಳಿಗೆ ಪ್ರಯಾಣ ಬೆಳೆಸಿದ್ದರು.
ಈ ವೇಳೆ ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆಸಿದ ಇಬ್ಬರು ದುಷ್ಕರ್ಮಿಗಳು 55 ಗ್ರಾಂ ಮಾಂಗಲ್ಯ ಸರ, ನೆಕ್ಲೆಸ್ ಹಾಗೂ ಲಾಂಗ್ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
Advertisement