ಕೇಂದ್ರ ಸರ್ಕಾರ ರಾಜ್ಯಕ್ಕೆ ಕೂಡಲೇ ರೂ.25 ಸಾವಿರ ಕೋಟಿ ಬಿಡುಗಡೆ ಮಾಡಬೇಕು: ಗೃಹ ಸಚಿವ ಬೊಮ್ಮಾಯಿ

ಕೊರೋನಾದಿಂದ ಎದುರಾಗಿರುವ ಆರ್ಥಿಕ ಒತ್ತಡಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ 2020 ಸೆಪ್ಟೆಂಬರ್ ವರೆಗೆ ಸಂಗ್ರಹಿಸಿದ ಸುಮಾರು ರೂ. 25 ಸಾವಿರ ಕೋಟಿ ನಷ್ಟ ಪರಿಹಾರ ಸೆಸ್'ನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೋನಾದಿಂದ ಎದುರಾಗಿರುವ ಆರ್ಥಿಕ ಒತ್ತಡಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ 2020 ಸೆಪ್ಟೆಂಬರ್ ವರೆಗೆ ಸಂಗ್ರಹಿಸಿದ ಸುಮಾರು ರೂ. 25 ಸಾವಿರ ಕೋಟಿ ನಷ್ಟ ಪರಿಹಾರ ಸೆಸ್'ನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಜಿಎಸ್'ಟಿ ಪರಿಷತ್ತಿನ 42ನೇ ಸಭೆಯಲ್ಲಿ ಭಾಗವಹಿಸಿದ ಅವರು, ಕೊರೋನಾದಿಂದಾಗಿ ರಾಜ್ಯ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ಕುರಿತು ಮಾತನಾಡಿದ್ದಾರೆ. 

ಇದೇ ವೇಳೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ವಯ ಆದಾಯ ನಷ್ಟ ಪರಿಹಾರವಾಗಿ 2020 ಸೆಪ್ಟೆಂಬರ್ವರೆಗೆ ಸಂಗ್ರಹವಾಗಿರುವ ಸೆಸ್ ಮೊತ್ತವನ್ನು ರಾಜ್ಯಗಳಿಗೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮಗಳನ್ನು ಸ್ವಾಗತಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com