ಚೇತರಿಸಿಕೊಳ್ಳುತ್ತಿದೆ ಕರುನಾಡು: ರಾಜ್ಯದಲ್ಲಿ 8,191 ಮಂದಿಗೆ ಕೊರೋನಾ ಪಾಸಿಟಿವ್, 10,421 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 8,191 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7,26,106ಕ್ಕೆ ಏರಿಕೆಯಾಗಿದೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 8,191 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7,26,106ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 87 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,123ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 3,776 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 2,88,831ಕ್ಕೆ ಏರಿಕೆಯಾಗಿದೆ. ಇನ್ನು 28 ಮಂದಿಯಾಗಿದ್ದು ಸಾವಿನ ಸಂಖ್ಯೆ 3,390ಕ್ಕೆ ಏರಿಕೆಯಾಗಿದೆ. 

ಇಂದು 10,421 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 6,02,505ಕ್ಕೆ ಏರಿಕೆಯಾಗಿದೆ. 1,13,459 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆಯಲ್ಲಿ 88, ಬಳ್ಳಾರಿಯಲ್ಲಿ 38, ಬೆಳಗಾವಿಯಲ್ಲಿ 358, ಬೆಂಗಳೂರು ಗ್ರಾಮಾಂತರದಲ್ಲಿ 208, ಬೀದರ್ ನಲ್ಲಿ 23, ಚಾಮರಾಜನಗರದಲ್ಲಿ 61, ಚಿಕ್ಕಬಳ್ಳಾಪುರದಲ್ಲಿ 136, ದಕ್ಷಿಣ ಕನ್ನಡದಲ್ಲಿ 314,  ಗದಗದಲ್ಲಿ 66, ಕಲಬುರಗಿಯಲ್ಲಿ 144, ಕೊಡಗಿನಲ್ಲಿ 151, ಕೋಲಾರದಲ್ಲಿ 101, ಕೊಪ್ಪಳದಲ್ಲಿ 37, ರಾಯಚೂರಿನಲ್ಲಿ 36, ರಾಮನಗರದಲ್ಲಿ 59, ವಿಜಯಪುರದಲ್ಲಿ 87, ಯಾದಗಿರಿಯಲ್ಲಿ 53 ಪ್ರಕರಣಗಳು ವರದಿಯಾಗಿವೆ.

ಚಿಕ್ಕಮಗಳೂರಿನಲ್ಲಿ 231, ಚಿತ್ರದುರ್ಗದಲ್ಲಿ 242, ದಕ್ಷಿಣ ಕನ್ನಡದಲ್ಲಿ 314, ದಾವಣಗೆರೆಯಲ್ಲಿ 106, ಧಾರವಾಡದಲ್ಲಿ 154, ಹಾಸನದಲ್ಲಿ 238, ಹಾವೇರಿಯಲ್ಲಿ 39, ಮಂಡ್ಯದಲ್ಲಿ 215, ಮೈಸೂರಿನಲ್ಲಿ 416, ಶಿವಮೊಗ್ಗದಲ್ಲಿ 170, ತುಮಕೂರಿನಲ್ಲಿ 391, ಉಡುಪಿಯಲ್ಲಿ 368, ಉತ್ತರಕನ್ನಡದಲ್ಲಿ 115 ಪ್ರಕರಣಗಳು ವರದಿಯಾಗಿವೆ ಎಂದು ಆರೊಗ್ಯ ಇಲಾಖೆ  ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com