ಮನಕಲಕುವ ದೃಶ್ಯ: ಗುಮ್ಮಟನಗರಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮರಿಗಳನ್ನು ರಕ್ಷಿಸಿದ ಶ್ವಾನ

ಭೀಕರ ಪ್ರವಾಹದಿಂದ ಕೇವಲ ಗುಮ್ಮಟನಗರಿ ಮಂದಿ ಅಷ್ಟೇ ಅಲ್ಲ, ಮೂಕ ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ವಿಜಯಪುರ: ಭೀಕರ ಪ್ರವಾಹದಿಂದ ಕೇವಲ ಗುಮ್ಮಟನಗರಿ ಮಂದಿ ಅಷ್ಟೇ ಅಲ್ಲ, ಮೂಕ ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ.

ಜಿಲ್ಲೆಯ‌ ನಡುಗಡೆಯಾಗಿರುವ ತಾರಾಪುರದಲ್ಲಿ ಮೂಕ‌ ಶ್ವಾನವೊಂದು ತನ್ನ ಮಕ್ಕಳನ್ನು ರಕ್ಷಿಸಿರುವ ಮನಕಲುಕುವ ದೃಶ್ಯವೊಂದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಶುಕ್ರವಾರ ಪ್ರವಾಹದಲ್ಲಿ ಮರಿಗಳು ಸಿಲುಕಿದ್ದವು. ಇಂದು ನೀರಿನಲ್ಲಿದ್ದ ತನ್ನ ಮರಿಗಳನ್ನು ಶ್ವಾನ ಬಾಯಿಯಲ್ಲಿ ಗಟ್ಟಿಯಾಗಿ ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com