ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊರೋನಾ ಸಾಂಕ್ರಾಮಿಕದ ನಡುವೆ ನಡೆಯುತ್ತಿರುವ ಸರಳ ದಸರಾದಲ್ಲಿ ಈ ಬಾರಿ ಕೇವಲ 2 ಸ್ಥಬ್ಧಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಹೌದು.. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಕೇವಲ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಸ್ತಬ್ಧಚಿತ್ರಗಳನ್ನು ಎರಡಕ್ಕೆ ಸೀಮಿತಗೊಳಿಸಲಾಗಿದೆ. ಈ ಎರಡು ಸ್ಥಬ್ಧ ಚಿತ್ರಗಳ ಪೈಕಿ ಮೈಸೂರು ಜಿಲ್ಲಾ ಪಂಚಾಯತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಒಂದಾಗಿದ್ದು, ಮಹಾಮಾರಿ ಕೊರೊನಾವನ್ನು ತಡೆಯಲು ಕೊರೊನಾ ವಾರಿಯರ್ಸ್ಗಳ ಪಾತ್ರ ಅತಿ ಮುಖ್ಯ ಹೀಗಾಗಿ ಈ ಸ್ತಬ್ಧಚಿತ್ರವನ್ನು ಅವರಿಗಾಗಿ ಅರ್ಪಿಸಲಾಗಿದೆ. ಅಂತೆಯೇ ಇಡೀ ವಿಶ್ವ, ಕುಟುಂಬವನ್ನು ವೈದ್ಯರು ಕಾಪಾಡುತ್ತಿದ್ದಾರೆ ಎಂದು ಸಾರುವ ಚಿತ್ರ ಇದಾಗಿದೆ.
ಇನ್ನು ಮತ್ತೊಂದು ವಿಶೇಷ ಅಂದ್ರೆ ಅದು ಅರಮನೆ ವಾದ್ಯಗೋಷ್ಠಿಯ ನಿರ್ಮಾಣ ಮಾಡಲಾಗಿದೆ. ಇದನ್ನು ಆನೆ ಬಂಡಿ ಸ್ತಬ್ಧಚಿತ್ರ ಎನ್ನಲಾಗುತ್ತೆ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರೆವಣೆಗೆಯಲ್ಲಿ ಭಾಗವಹಿಸಲಿವೆ.
Advertisement