ಹಾಸನ: ಕಾಡಾನೆ ತುಳಿತದಿಂದ ದೇವಸ್ಥಾನದ ಅರ್ಚಕ ಸಾವು

ಜಿಲ್ಲೆಯ ಸಕಲೇಶಪುರ ಹೊರವಲಯದಲ್ಲಿರುವ ಕೊಲ್ಲಹಳ್ಳಿಯಲ್ಲಿ 48 ವರ್ಷದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಜಿಲ್ಲೆಯ ಸಕಲೇಶಪುರ ಹೊರವಲಯದಲ್ಲಿರುವ ಕೊಲ್ಲಹಳ್ಳಿಯಲ್ಲಿ 48 ವರ್ಷದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ.

ಮೃತರನ್ನು ಸಕಲೇಶಪುರ ಹೊರವಲಯದ ಗುಕೇಲಮ್ಮನ್‍ ದೇವಸ್ಥಾನದ ಅರ್ಚಕ ಅಸ್ತಿಕ್‍ ಭಟ್ ಎಂದು ಗುರುತಿಸಲಾಗಿದೆ ಎಂಬುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

ಅರ್ಚಕರು  ಕೊಳದಿಂದ ದೇವಸ್ಥಾನಕ್ಕೆ ನೀರು ತರುತ್ತಿದ್ದಾಗ, ಕಾಡಾನೆ ದಾಳಿ ನಡೆಸಿದೆ. ಆನೆಯ ಕಾಲ್ತುಳಿತದಿಂದ ಅರ್ಚಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com