ಬೆಂಗಳೂರು: ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ವೇದಿಕೆ, ಭಾರತೀಯ ಮೋಟಾರ್ ಸೈಕಲ್ ಮತ್ತು ಓಕ್ವುಡ್ ಪ್ರೀಮಿಯರ್ ಪ್ರೆಸ್ಟೀಜ್ ವತಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೂ ಮೋಟಾರ್ ಸೈಕಲ್ ರ್ಯಾಲಿ ಆಯೋಜಿಸಲಾಗಿತ್ತು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿಕೆ ಅನಿಲ್ ಕುಮಾರ್ ಈ ರ್ಯಾಲಿಗೆ ಹಸಿರು ನಿಶಾನೆ ತೋರಿದರು.
ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ರ್ಯಾಲಿ ಎಂಬ ಶೀರ್ಷಿಕೆಯೊಂದಿಗೆ, ಸಾಮಾಜಿಕ ಅಂತರ ಮತ್ತು ಸ್ವಯಂ ಸುರಕ್ಷತೆಯೊಂದಿಗೆ ಕರ್ನಾಟಕ ಪ್ರಯಾಣಿಸಲು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಬೆಂಗಳೂರಿನ ಉದ್ಯಮಿಗಳು ಮತ್ತು ನಿಗಮಗಳ ಕಾರ್ಯನಿರ್ವಾಹಕರು ಮೂರು ಗಂಟೆಗಳಲ್ಲಿ 143.4 ಕಿ ಲೋ ಮೀಟರ್ ದೂರ ಬೈಕ್ ರ್ಯಾಲಿಯ ನಡೆಸಿದರು.
Advertisement