ತಿರುಮಲದಲ್ಲಿಂದು ಬ್ರಹ್ಮೋತ್ಸವ ಕಾರ್ಯಕ್ರಮಗಳು: ತಿಮ್ಮಪ್ಪನಿಗೆ ಪಟ್ಟೆವಸ್ತ್ರ ಸಮರ್ಪಿಸಲಿರುವ ಸಿಎಂ ಯಡಿಯೂರಪ್ಪ

ಕೊರೋನಾ ಸಂಕಷ್ಟದ ನಡುವಲ್ಲೇ ಆಂಧ್ರಪ್ರದೇಶದ ತಿರುಮಲದಲ್ಲಿ ಸಾಲಕೊಟ್ಲ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದ್ದು, ತಿರುಮಲದಲ್ಲಿಂದು 5ನೇ ದಿನದ ಸಾಲಕೊಟ್ಲ ಬ್ರಹ್ಮೋತ್ಸವ ಕಾರ್ಯಕ್ರಮ ವೆಂಕಟೇಶ್ವರ ದೇವಾಲಯದಲ್ಲಿ ಜರುಗುತ್ತಿದೆ. ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸಂಕಷ್ಟದ ನಡುವಲ್ಲೇ ಆಂಧ್ರಪ್ರದೇಶದ ತಿರುಮಲದಲ್ಲಿ ಸಾಲಕೊಟ್ಲ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದ್ದು, ತಿರುಮಲದಲ್ಲಿಂದು 5ನೇ ದಿನದ ಸಾಲಕೊಟ್ಲ ಬ್ರಹ್ಮೋತ್ಸವ ಕಾರ್ಯಕ್ರಮ ವೆಂಕಟೇಶ್ವರ ದೇವಾಲಯದಲ್ಲಿ ಜರುಗುತ್ತಿದೆ. ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಇಂದು‌ ಸಂಜೆ ಸಿಎಂ ಯಡಿಯೂರಪ್ಪ ಯಡಿಯೂರಪ್ಪ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬಾಲಾಜಿಗೆ ರಾಜ್ಯಗಳ ಪರ ಪಟ್ಟೆವಸ್ತ್ರ ಸಮರ್ಪಣೆ ಮಾಡಲಿದ್ದಾರೆ.

ಇಂದು ಮೋಹಿನಿ ಅವತಾರದಲ್ಲಿ ಶ್ರೀನಿವಾಸ ಭಕ್ತರಿಗೆ ಅಭಯ ನೀಡಲಿದ್ದಾನೆ. ರಾತ್ರಿ 8 ಗಂಟೆಯಿಂದ ಗರುಡ ವಾಹನ‌ದ‌ ಮೇಲೆ ಮಲೆಯಪ್ಪಸ್ವಾಮಿ ಮೆರವಣಿಗೆ ನಡೆಯುತ್ತೆ. ಕೋವಿಡ್ ನಿರ್ಬಂಧನೆಗಳ ಕಾರಣ ಕಲ್ಯಾಣೋತ್ಸವ ಕೇವಲ ಮಂಟಪ್ಪಕ್ಕೆ ಕಾರ್ಯಕ್ರಮಗಳನ್ನು ಸೀಮಿತ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com