ಹಾವೇರಿ: ಎರಡು ದಿನಗಳ ಹಿಂದೆ ಎತ್ತಿನ ಬಂಡಿ ಸಮೇತ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಶವ ಪತ್ತೆಯಾಗಿದೆ.
ನದಿಯಲ್ಲಿ ಮರಳು ತರಲು ಹೋಗಿದ್ದ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಜಗದೀಶ್ ಐರಣಿ (25), ಬೆಟ್ಟಪ್ಪ ಮಿಳ್ಳಿ (25) ಎನ್ನುವವರ ಶವ ಇಂದು ಪತ್ತೆಯಾಗಿದೆ.
ಸತತ ಎರಡು ದಿನಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂಡನೆ ಕಾರ್ಯಾಚರಣೆ ನಡೆದ ನಂತರ 9 ಕಿ.ಮೀ ಅಂತರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಸಧ್ಯ ಮೃತ ಯುವಕರ ಕುಟುಂಬ, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement