ಹಾವೇರಿ: ಎತ್ತಿನ ಬಂಡಿ ಸಮೇತ ನೀರುಪಾಲಾಗಿದ್ದ ಇಬ್ಬರು ಯುವಕರ ಶವ ಪತ್ತೆ

ಎರಡು ದಿನಗಳ ಹಿಂದೆ ಎತ್ತಿನ ಬಂಡಿ ಸಮೇತ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಶವ ಪತ್ತೆಯಾಗಿದೆ. 
ಮೃತ ಯುವಕರಾದ  ಜಗದೀಶ್ ​ಐರಣಿ  ಹಾಗೂ ಬೆಟ್ಟಪ್ಪ ಮಿಳ್ಳಿ
ಮೃತ ಯುವಕರಾದ ಜಗದೀಶ್ ​ಐರಣಿ ಹಾಗೂ ಬೆಟ್ಟಪ್ಪ ಮಿಳ್ಳಿ

ಹಾವೇರಿ: ಎರಡು ದಿನಗಳ ಹಿಂದೆ ಎತ್ತಿನ ಬಂಡಿ ಸಮೇತ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಶವ ಪತ್ತೆಯಾಗಿದೆ. 

ನದಿಯಲ್ಲಿ ಮರಳು ತರಲು ಹೋಗಿದ್ದ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಜಗದೀಶ್ ​ಐರಣಿ (25), ಬೆಟ್ಟಪ್ಪ ಮಿಳ್ಳಿ (25) ಎನ್ನುವವರ ಶವ ಇಂದು ಪತ್ತೆಯಾಗಿದೆ.    

ಸತತ ಎರಡು ದಿನಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂಡನೆ ಕಾರ್ಯಾಚರಣೆ ನಡೆದ ನಂತರ  9 ಕಿ.ಮೀ ಅಂತರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಸಧ್ಯ ಮೃತ ಯುವಕರ ಕುಟುಂಬ, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com