ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ; ಕೋವಿಡ್-19 ವಿಪತ್ತು ವಲಯವಾಗುತ್ತಿದೆ ಉದ್ಯಾನನಗರಿ: ವೈದ್ಯರ ಆತಂಕ

ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪರಿಸ್ಥಿತಿ ಕೈಮೀರುತ್ತಿದ್ದು, ಉದ್ಯಾನನಗರಿ ಕೊರೋನಾ ವಿಪತ್ತು ಕೇಂದ್ರವಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ಮತ್ತು ಮಾರ್ಷಲ್ ಗಳು
ಮಾಸ್ಕ್ ಮತ್ತು ಮಾರ್ಷಲ್ ಗಳು

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪರಿಸ್ಥಿತಿ ಕೈಮೀರುತ್ತಿದ್ದು, ಉದ್ಯಾನನಗರಿ ಕೊರೋನಾ ವಿಪತ್ತು ಕೇಂದ್ರವಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಮೇ 2ನೇ ವಾರದಲ್ಲಿ ಕೋವಿಡ್-19 2ನೇ ಅಲೆ ಉತ್ತುಂಗಕ್ಕೇರಲಿದ್ದು, ಈ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ಮತ್ತು ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಆ ವೇಳೆ ಉದ್ಯಾನನಗರಿ ಬೆಂಗಳೂರು, "ದೇಶವು ಯುಗಯುಗದಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ವಿಪತ್ತು ವಲಯವಾಗಿ  ಬದಲಾಗಬಹುದು ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಅಂತೆಯೇ ಈ ವಿಪತ್ತು ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವ ಅವರು ತಕ್ಷಣ 3 ಎ ತಂತ್ರ (Acknowledge, Apply Brake and Augment-ಒಪ್ಪಿಕೊಳ್ಳುವುದು, ಸೋಂಕು ಪ್ರಸರಣಕ್ಕೆ ತಡೆ ಒಡ್ಡುವುದು ಮತ್ತು ಸೋಂಕು ನಿಯಂತ್ರಣ ಕ್ರಮಗಳ ಬಲವರ್ಧನೆ)ವನ್ನು  ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಬಾಬು ಆರ್ ಅವರು, 'ಕೋವಿಡ್ ಸೋಂಕು ಪ್ರಸರಣದ ದೃಷ್ಟಿಯಿಂದ ಮುಂದಿನ ಎರಡು ತಿಂಗಳುಗಳು ಕರ್ನಾಟಕಕ್ಕೆ ನಿರ್ಣಾಯಕವಾಗಿರಲಿದೆ. ಕೇವಲ ಜನರು  ಮಾತ್ರವಲ್ಲ, ಎಲ್ಲರೂ ಹೆಚ್ಚಿನ ಕಾಳಜಿ ಮತ್ತು ಮುನ್ನೆಚ್ಚರಿಕೆ ವಹಿಸಬೇಕು, ಅಂತೆಯೇ ಸರ್ಕಾರವು ಕೂಡ ಬೆಂಗಳೂರಿನ ಸೋಂಕಿನ ಪ್ರಮಾಣವನ್ನು ನಿಭಾಯಿಸಬೇಕು ಮತ್ತು ಯುದ್ಧದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಸರ್ಕಾರವು 3 ಎ ತಂತ್ರಗಳನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು  ಹೇಳಿದ್ದಾರೆ.

ಅಂತೆಯೇ ಇದೇ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ ಬಾಬು ಅವರು, 'ಮೊದಲಿಗೆ, ಪ್ರಸ್ತುತ ಕೈಮೀರಿರುವ ಪರಿಸ್ಥಿತಿಯನ್ನು ಸರ್ಕಾರ ಅಂಗೀಕರಿಸಬೇಕು. ಭಾನುವಾರ, ಯಾವುದೇ ಐಸಿಯು ಹಾಸಿಗೆಗಳು ಖಾಲಿ ಇರಲಿಲ್ಲ ಮತ್ತು ಅದೇ ಪರಿಸ್ಥಿತಿ ಹಲವು  ದಿನಗಳವರೆಗೆ ಮುಂದುವರಿಯುತ್ತದೆ. ಇದು ಕೆಲವೇ ದಿನಗಳಲ್ಲಿ ಸಾವುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆರೋಗ್ಯ ಮೂಲಸೌಕರ್ಯಗಳ ಕೊರತೆ ಇದೆ. ಇದನ್ನು ಸರ್ಕಾರ ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.

ಅಂತೆಯೇ ಹಾಲಿ ಪರಿಸ್ಥಿತಿಯನ್ನು ತಕ್ಷಣ ಸರ್ಕಾರ ಅಂಗೀಕರಿಸುವುದು ಮತ್ತು ಈ ಸಂಬಂಧ ತತ್ ಕ್ಷಣದಿಂದಲೇ ಕಾರ್ಯನಿರ್ವಹಿಸುವುದು ಉತ್ತಮ. ಎರಡನೆಯ ‘ಎ’ ಬ್ರೇಕ್‌ಗಳನ್ನು ಅನ್ವಯಿಸುವುದು ಅಂದರೆ ಸೋಂಕು ಪ್ರಸರಣಕ್ಕೆ ತಡೆ ಒಡ್ಡುವುದು. ನಗರಕ್ಕೆ ಸಂಪೂರ್ಣ ಲಾಕ್‌ಡೌನ್ ಅಥವಾ ಕರ್ಫ್ಯೂ ಅನ್ನು ಈಗ  ಖಾತರಿಪಡಿಸಲಾಗಿದೆ. ಇಡೀ ರಾಜ್ಯಕ್ಕೆ ಅಲ್ಲದಿದ್ದರೂ ಕನಿಷ್ಠ ಪಕ್ಷ ಬೆಂಗಳೂರಿಗೆ ಈ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಆದಾಗ್ಯೂ, ಕನಿಷ್ಠ ದೈನಂದಿನ ವೇತನವನ್ನು ನೇರ ವರ್ಗಾವಣೆ, ವಲಸಿಗರಿಗೆ ಸಾಮಾಜಿಕ ಕ್ರಮಗಳು ಮತ್ತು ಹೆಚ್ಚಿದ ಪರೀಕ್ಷೆಯ ಜೊತೆಗೆ ಇದನ್ನು ಮಾಡಬೇಕು.

ಅಗತ್ಯ  ಚಟುವಟಿಕೆಗಳಲ್ಲಿ ಎಲ್ಲರಿಗೂ ಉಚಿತ N95 ಮಾಸ್ಕ್ ಗಳನ್ನು ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಕೊನೆಯ ಎ ಎಂದರೆ ಹಾಸಿಗೆ/ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವುದು. ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿನ ಅವರ ಸಿಬ್ಬಂದಿ ಮತ್ತು ವೈದ್ಯರನ್ನು  ಸರ್ಕಾರವು ನಾಲ್ಕು ವಾರಗಳವರೆಗೆ ಸ್ವಾಧೀನಕ್ಕೆ ಪಡೆದು ಕಾರ್ಯ ನಿರ್ವಹಿಸಬೇಕು ಎಂದು ಡಾ.ಬಾಬು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com