ಬಸವರಾಜ ಬೊಮ್ಮಾಯಿ ಸಿಎಂ ಆದ ಬೆನ್ನಲ್ಲೇ ಶಿಗ್ಗಾಂವಿಗೆ ಶಾಶ್ವತ ಹೆಲಿಪ್ಯಾಡ್ 

ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆಯೇ ಅವರ ತವರು ಜಿಲ್ಲೆ ಹಾಗೂ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ತಕ್ಷಣಕ್ಕೆ ಹಲವಾರು ಬದಲಾವಣೆಗಳು ಕಂಡುಬರುತ್ತಿವೆ. 
ಹಾವೇರಿಯ ಶಿಗ್ಗಾಂವಿಯಲ್ಲಿರುವ ಬಸವರಾಜ ಬೊಮ್ಮಾಯಿ ಅವರ ನಿವಾಸ
ಹಾವೇರಿಯ ಶಿಗ್ಗಾಂವಿಯಲ್ಲಿರುವ ಬಸವರಾಜ ಬೊಮ್ಮಾಯಿ ಅವರ ನಿವಾಸ

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆಯೇ ಅವರ ತವರು ಜಿಲ್ಲೆ ಹಾಗೂ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ತಕ್ಷಣಕ್ಕೆ ಹಲವಾರು ಬದಲಾವಣೆಗಳು ಕಂಡುಬರುತ್ತಿವೆ. 

ಸಿಎಂ ಹಾಗೂ ಅವರ ಶಿಗ್ಗಾಂವಿ, ಹುಬ್ಬಳ್ಳಿಯ ನಿವಾಸಗಳಲ್ಲಿ ಭದ್ರತೆಯನ್ನು ಹೆಚ್ಚುಗೊಳಿಸಲಾಗುತ್ತಿದ್ದು, ಶಿಗ್ಗಾಂವಿಯಲ್ಲಿ ಶಾಶ್ವತ ಹೆಲಿಪ್ಯಾಡ್ ನ್ನು ನಿರ್ಮಾಣ ಮಾಡಲಾಗುತ್ತಿದೆ. 

ಬೊಮ್ಮಾಯಿ ಅವರ ಎರಡೂ ನಿವಾಸಗಳ ಬಳಿ ವಾಚ್ ಟವರ್ (ಕಣ್ಗಾವಲು ಗೋಪುರಗಳು) ನಿರ್ಮಾಣವಾಗುತ್ತಿದ್ದು, 2-3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳು ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದು ಹೆಲಿಪ್ಯಾಡ್ ಗೆ ಎರಡು ಸಂಭಾವ್ಯ ಪ್ರದೇಶಗಳನ್ನು ಗುರುತಿಸಿದ್ದಾರೆ.  ಒಂದು ಕಂದಾಯ ಭೂಮಿಯಲ್ಲಿದ್ದರೆ, ಮತ್ತೊಂದು ಖಾಸಗಿ ಆಸ್ತಿಯಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಂದೇ ಹೆಲಿಪ್ಯಾಡ್ ಗೆ ಜಾಗ ಗುರುತಿಸುವ ಕೆಲಸವೂ ಪ್ರಾರಂಭವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಹೆಲಿಪ್ಯಾಡ್ ನ್ನು ಸಿಎಂ ಮಾತ್ರವಲ್ಲದೇ ವಿಐಪಿ ಗಳೂ ಬಳಕೆ ಮಾಡಬಹುದಾಗಿದೆ. ಆರೋಗ್ಯ ಸಮಸ್ಯೆಗೆ ತುರ್ತು ಚಿಕಿತ್ಸೆ ಅಗತ್ಯವಿರುವವರನ್ನೂ ಈ ಹೆಲಿಪ್ಯಾಡ್ ನಿಂದ ಏರ್ ಲಿಫ್ಟ್ ಮಾಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com