ಬೆಂಗಳೂರು: ಮಹಿಳೆ ವಿಚಾರವಾಗಿ ಹಾಡಹಗಲೇ ರೌಡಿ ಶೀಟರ್ ಬರ್ಬರ ಹತ್ಯೆ

ಹಳೇಯ ದ್ವೇಷದ ಹಿನ್ನೆಲೆಯಲ್ಲಿ 43 ವರ್ಷದ ರೌಡಿ ಶೀಟರ್ ನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ದೇವರಜೀವನಹಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಳೇಯ ದ್ವೇಷದ ಹಿನ್ನೆಲೆಯಲ್ಲಿ 43 ವರ್ಷದ ರೌಡಿ ಶೀಟರ್ ನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ದೇವರಜೀವನಹಳ್ಳಿಯಲ್ಲಿ ನಡೆದಿದೆ.

ಡಾ.ಅಂಬೇಡ್ಕರ್ ನಗರದ ನಿವಾಸಿ ಮಜರ್ ಖಾನ್ ಕೊಲೆಯಾದ ರೌಡಿ ಶೀಟರ್, ಈತನ ವಿರುದ್ದ ಕೊಲೆ ಯತ್ನ, ಬೆದರಿಕೆ ಸೇರಿದಂತೆ ಹಲವು ಕ್ರಿಮಿನಲ್ ಕೇಸ್  ಗಳು ದಾಖಲಾಗಿದ್ದವು. 

ಶನಿವಾರ ಬೆಳಗ್ಗೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಜರ್ ನಲ್ಲ ಹಲವು ಬಾರಿ ಚುಚ್ಚಿ ಬಡಿದು ಕೊಂದಿದ್ದಾರೆ. ಮಹಿಳೆಯ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಮಜರ್ ಮಹಿಳೆ ನಡೆಸುತ್ತಿದ್ದ ಅಂಗಡಿಗೆ ಹೋಗಿದ್ದಾನೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ, ಇದನ್ನು ನೋಡಿ ಹಲವರು ಬಂದು ಗುಂಪು ಗೂಡಿದ್ದಾರೆ. ಮಹಿಳೆ ಆತನಿಗೆ ಎಚ್ಚರಿಕೆ ನೀಡಿದರೂ ಅತನ ಮತ್ತೆ ಆಕೆಯನ್ನು ಚುಡಾಯಿಸಿದ್ದಾನೆ. 

ಮುಜುಗರಕ್ಕೊಳಗಾದ ಆಕೆ ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ, ಇದರಿಂದ ಕೋಪಗೊಂಡ ಆಕೆಯ ಕುಟುಂಬಸ್ಥರು ಮಜರ್ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com