ರಾಜ್ಯ
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ರೀತಿ ತುಮಕೂರಿನಲ್ಲಿ ಮತ್ತೊಂದು ಕ್ರೈಮ್: ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ
ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವಂತಹ ಎರಡು ಪ್ರತ್ಯೇಕ ಘಟನೆಗಳು ರಾಜ್ಯದಲ್ಲಿ ನಡೆದಿವೆ. ಒಂದು ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ ಇನ್ನೊಂದು ತುಮಕೂರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು ಮಹಿಳೆಯ ಹತ್ಯೆಯಾಗಿದೆ.
ತುಮಕೂರು: ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವಂತಹ ಎರಡು ಪ್ರತ್ಯೇಕ ಘಟನೆಗಳು ರಾಜ್ಯದಲ್ಲಿ ನಡೆದಿವೆ. ಒಂದು ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ ಇನ್ನೊಂದು ತುಮಕೂರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು ಮಹಿಳೆಯ ಹತ್ಯೆಯಾಗಿದೆ.
ತುಮಕೂರಿನಲ್ಲಿ 30 ವರ್ಷದ ಮಹಿಳೆಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಘಟನೆ ಹೀರೇಹಳ್ಳಿಯ ಚೋಟಸಬರಪಾಳ್ಯದಲ್ಲಿ ನಡೆದಿದೆ. ಮಹಿಳೆ ಬೆಟ್ಟಕ್ಕೆ ತಮ್ಮ ಹಸುಗಳನ್ನು ಮೇಯಿಸಲು ಹೋಗಿದ್ದರು.
ಹಸುಗಳನ್ನು ಮೇಯಿಸಲು ಹೋದ ಮಹಿಳೆ ಎಷ್ಟು ಹೊತ್ತಾದರೂ ವಾಪಸ್ಸಾಗದಿದ್ದಾಗ ಆಕೆಯ ಪತಿ ಹುಡುಕುತ್ತಾ ಹೋದಾಗ ಸಿಕ್ಕಿದ್ದು ಪತ್ನಿಯ ಶವ. ಪತ್ನಿಯನ್ನು ಕತ್ತು ಕೊಯ್ದು ಕಾಮುಕರು ಕೊಂದು ಹಾಕಿದ್ದರು.
ಮಹಿಳೆಯ ಕುತ್ತಿಗೆಯಲ್ಲಿ ಮಂಗಳಸೂತ್ರ ಕಾಣದಿದ್ದಾಗ ಆರಂಭದಲ್ಲಿ ಪೊಲೀಸರು ಇದು ಹಣಕ್ಕಾಗಿ ನಡೆದ ಕೊಲೆ ಎಂದು ಶಂಕಿಸಿದ್ದರು. ಆದರೆ ನಂತರ ಶವದ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿದ್ದು ದೃಢಪಟ್ಟಿದೆ.