ಬೆಂಗಳೂರು: ಸ್ಟಾಂಡಪ್ ಕಮೀಡಿಯನ್ ಮುನಾವರ್ ಫರೂಕಿ ಹಾಸ್ಯ ಕಾರ್ಯಕ್ರಮ ರದ್ದುಗೊಂಡ ಬೆನ್ನಲ್ಲೇ ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಮತ್ತೋರ್ವ ಜನಪ್ರಿಯ ಕಮೀಡಿಯನ್ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವೂ ರದ್ದಾಗಿದೆ.
ಕುನಾಲ್ ಕಾಮ್ರಾ ಅವರ ಕಾರ್ಯಕ್ರಮ ಜೆ.ಪಿ. ನಗರದಲ್ಲಿ ಆಯೋಜನೆಯಾಗಿತ್ತು. ಅಲ್ಲಿನ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮ ರದ್ದಾಗಿರುವ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಿವಾಸಿಗಳ ವಿರೋಧದಿಂದಾಗಿ ಕಾರ್ಯಾಕ್ರಮ ಆಯೋಜಕರೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಕುನಾಲ್ ಕಾಮ್ರಾ ಟ್ವೀಟ್ ಮಾಡಿದ್ದು, ತಾವು ಕಾರ್ಯಕ್ರಮ ನೀಡಿದರೆ ಆಯೋಜಕರಿಗೆ ತೊಂದರೆ ಉಂಟುಮಾಡುವುದಾಗಿ ಬೆದರಿಕೆ ಕೇಳಿಬಂದಿದ್ದರಿಂದ ಆಯೋಜಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.
ಅಲ್ಲದೆ ಕೊರೊನಾ ಪರಿಸ್ಥಿತಿಯೂ ಇದಕ್ಕೆ ಕಾರಣವಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮನ್ನೂ ಕೊರೊನಾ ವೈರಸ್ ತಳಿ ಎಂದು ಕೆಲವರು ಭಾವಿಸಿದಂತಿದೆ ಎಂದು ಅವರು ಅಣಕವಾಡಿದ್ದಾರೆ.
Advertisement