ಬೆಳಗಾವಿ: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಕೆಳದಿ ಶಿವಪ್ಪ ನಾಯಕ ಹೆಸರನ್ನಿಡಲಾಗುತ್ತದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ವಿಧಾನ ಸಭೆಯಲ್ಲಿಂದು ಕೃಷಿವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ ತಿದ್ದುಪಡಿ 2021ಕ್ಕೆ ವಿಧೇಯಕವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಂಡಿಸಿದರು.
ಕೃಷಿವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ 2009ಕ್ಕೆ ತಿದ್ದುಪಡಿ ತಂದು “ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ” ಎಂಬ ಪದಗಳಿಗೆ “ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ” ಎಂಬ ನಾಮಕರಣಗೊಳಿಸಿ ತಿದ್ದುಪಡಿಗೊಳಿಸಲಾಗಿದೆ.
ವಿವಿಯ ನಾಮಕರಣದ ಸಂದರ್ಭದಲ್ಲಿ ಆಂಗ್ಲ ಪದದಲ್ಲಿ “ಶಿಮೊಗ” ಎಂಬ ಪದ ಬರುವ ಕಡೆಯಲ್ಲಿ “ಶಿವಮೊಗ್ಗೆ” ಎಂಬ ಪದ ಬಳಸಲು ತಿದ್ದುಪಡಿಸಲಾಗಿದೆ. ಕೃಷಿ ಸಚಿವರು ಮಂಡಿಸಿದ ವಿಧೇಯಕ್ಕೆ ವಿಧಾನಸಭೆ ಅನುಮೋದನೆ ನೀಡಿತು.
Advertisement