ಜುಲೈ 8 ರಿಂದ ಗೋವಾಕ್ಕೆ ಸರ್ಕಾರಿ ಬಸ್ ಕಾರ್ಯಾಚರಣೆ ಪುನಾರಾರಂಭ

ರಾಜ್ಯಾದಂತ ಅನ್ ಲಾಕ್ ಆಗಿರುವುದರಿಂದ ಇದೇ 8 ರಿಂದ ಗೋವಾ ರಾಜ್ಯಕ್ಕೆ ಹಾವೇರಿ ವಿಭಾಗದ ಹಿರೇಕೆರೂರು ರಾಣೇಬೆನ್ನೂರು, ಬ್ಯಾಡಗಿ ಹಾಗೂ  ಸವಣೂರ ಘಟಕದಿಂದ ಸಾರಿಗೆ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ವಾಕರಸಾಸಂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. 
ವಾಕರಸಾಸಂ ಬಸ್
ವಾಕರಸಾಸಂ ಬಸ್

ಹಾವೇರಿ: ರಾಜ್ಯಾದಂತ ಅನ್ಲಾಕ್ ಆಗಿರುವುದರಿಂದ ಇದೇ 8 ರಿಂದ ಗೋವಾ ರಾಜ್ಯಕ್ಕೆ ಹಾವೇರಿ ವಿಭಾಗದ ಹಿರೇಕೆರೂರು ರಾಣೇಬೆನ್ನೂರು, ಬ್ಯಾಡಗಿ ಹಾಗೂ  ಸವಣೂರ ಘಟಕದಿಂದ ಸಾರಿಗೆ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ವಾಕರಸಾಸಂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. 

ಹಿರೇಕೆರೂರು-ಪಣಜಿ, ರಾಣೇಬೆನ್ನೂರು-ಪಣಜಿ, ಬ್ಯಾಡಗಿ-ಪಣಜಿ-ಮಡಗಾಂ, ಸವಣೂರ- ವಾಸ್ಕೋ, ಮಡಗಾಂ, ಪಣಜಿ,ವಾಸ್ಕೋಕ್ಕೆ ಸಾರಿಗೆ ಕಾರ್ಯಾಚರಣೆ ಆರಂಭವಾಗಲಿದೆ.

ಪ್ರಯಾಣಿಕರು ಕಡ್ಡಾಯವಾಗಿ ಕಳೆದ ಮೂರು ದಿನದೊಳಗಾಗಿ ಪಡೆದ ಕೋವಿಡ್ ಆರ್.ಟಿ.ಪಿ.ಸಿ.ಆರ್. ರಿಪೋರ್ಟ್, ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿರಬೇಕು. ಪ್ರಯಾಣದ ಸಮಯದಲ್ಲಿ ನಿರ್ವಾಹಕರಿಗೆ ಈ ದಾಖಲೆಗಳನ್ನು ತೋರಿಸುವುದು ಕಡ್ಡಾಯವಾಗಿದೆ.

ಪ್ರಯಾಣಿಕರು ಆನ್‍ಲೈನ್ ಮುಖಾಂತರ ತಮ್ಮ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com