ಜನಸಂಖ್ಯಾ ನಿಯಂತ್ರಣವು ಕರ್ನಾಟಕಕ್ಕೆ 'ಹಾನಿಕಾರಕ': ತಜ್ಞರು

ಜನಸಂಖ್ಯಾ ನಿಯಂತ್ರಣದ ನೀತಿ ಕುರಿತಂತೆ ತೀವ್ರವಾಗಿ ಚರ್ಚೆಯಾಗುತ್ತಿರುವ ಸಮಯದಲ್ಲಿ, ಅಂತಹ ಕ್ರಮಗಳು ಪ್ರಕೃತಿಗೆ ಬಲವಂತದ್ದೆನ್ನುವಂತಿದ್ದು ತಮ್ಮ ಗಮನವನ್ನು ನಿಜವಾದ ಸಮಸ್ಯೆಗಳಿಂದ ದೂರವಿರಿಸುತ್ತದೆ ಎಂದು ತಜ್ಞರು ಭಾವಿಸುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜನಸಂಖ್ಯಾ ನಿಯಂತ್ರಣದ ನೀತಿ ಕುರಿತಂತೆ ತೀವ್ರವಾಗಿ ಚರ್ಚೆಯಾಗುತ್ತಿರುವ ಸಮಯದಲ್ಲಿ, ಅಂತಹ ಕ್ರಮಗಳು ಪ್ರಕೃತಿಗೆ ಬಲವಂತದ್ದೆನ್ನುವಂತಿದ್ದು ತಮ್ಮ ಗಮನವನ್ನು ನಿಜವಾದ ಸಮಸ್ಯೆಗಳಿಂದ ದೂರವಿರಿಸುತ್ತದೆ ಎಂದು ತಜ್ಞರು ಭಾವಿಸುತ್ತಾರೆ.

ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರುವ ಬಗ್ಗೆ ಯೋಚಿಸುವುದು “ವಿಪತ್ತಿಗೆ ಆಹ್ವಾನ"ಎಂದು ಹೇಳುತ್ತಾ, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಪೂನಮ್ ಮುತ್ರೇಜಾ ಯಾವುದೇ ರಾಜ್ಯಕ್ಕೆ ಅಂತಹ ನೀತಿ ಅಗತ್ಯವಿಲ್ಲ, ಮತ್ತು ಕರ್ನಾಟಕವು ಅಂತಹ 'ದಬ್ಬಾಳಿಕೆಯ' ನೀತಿಯನ್ನು ಜಾರಿಗೊಳಿಸಿದರೆ, ನಂತರ ಸರ್ಕಾರವು ಜನಸಂಖ್ಯೆ ಬೆಳೆಸುವವರಿಗೆ ಗೆ ಪ್ರೋತ್ಸಾಹ ಧನಗಳನ್ನು ನೀಡಲು ಪ್ರಾರಂಭಿಸಬೇಕಾಗುತ್ತದೆ, ವಿಶೇಷವಾಗಿ ಕರ್ನಾಟಕದ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) 1999 ರಲ್ಲಿ 2.5 ರಿಂದ 2020 ರಲ್ಲಿ 1.7 ಕ್ಕೆ ಇಳಿದಿದೆ, ಆದರೆ ಅಂದಾಜು ಟಿಎಫ್‌ಆರ್ 2.1 ಆಗಿದೆ.

ಇದು ಅನಾಹುತಕಾರಿಯಾಗಿದೆ.ಕರ್ನಾಟಕವು ಜನಸಖ್ಯೆ ಕ್ಷೀಣತೆಯಂತಹಾ ಸಮಸ್ಯೆಯನ್ನು ಎದುರಿಸಲಿದೆ, ಅದಾಗ ಮಗುವಿಗೆ ಜನ್ಮ ನೀಡಲು ಪ್ರೋತ್ಸಾಹವನ್ನು ನೀಡಬೇಕಾಗುತ್ತದೆ. ಇದು ನನ್ನ ಪ್ರಕಾರ ಒಂದು ಸಂಪೂರ್ಣ ‘ತಪ್ಪು’ ಎಂದು ಮುತ್ರೇಜಾ ಹೇಳಿದರು, ಅಲ್ಲದೆ, ಅಂತಹ ಘೋಷಣೆಗಳು ಹೊಸ ಫ್ಯಾಷನ್ ಎಂದು ಹೇಳಿದರು.

ರಾಷ್ಟ್ರೀಯ ಜನಸಂಖ್ಯಾ ನೀತಿ 2000 ರೂಪದಲ್ಲಿ ರಾಜ್ಯಗಳು ಸಮಗ್ರ ಚೌಕಟ್ಟು ಮತ್ತು ಸ್ಪೂರ್ತಿದಾಯಕ ದಾಖಲೆಯನ್ನು ಹೊಂದಿವೆ. ಇತ್ತೀಚೆಗೆ, 2020 ರ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಅರ್ಜಿಯೊಂದರ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸ್ವತಃ ಹೀಗೆ ಹೇಳಿದೆ, “ಒಂದು ನಿರ್ದಿಷ್ಟ ಸಂಖ್ಯೆಯ ಮಕ್ಕಳನ್ನು ಹೊಂದಲು ಯಾವುದೇ ಬಲಾತ್ಕಾರ ತಕ್ಕುದಲ್ಲ ಇದಕ್ಕೆ ಜನಸಂಖ್ಯಾ ವಿರೂಪಗಳು ಕಾರಣವಾಗಲಿದೆ".

ಜನಗಣತಿ ವ್ಯಾಯಾಮದ ಭಾಗವಾಗಿರುವ 2018 ರ ಮಾದರಿ ನೋಂದಣಿ ವ್ಯವಸ್ಥೆಯ ಪ್ರಕಾರ ಭಾರತದ ಟಿಎಫ್‌ಆರ್ ಈಗಾಗಲೇ ಗಣನೀಯವೆನ್ನುವಂತೆ 2.2 ಕ್ಕೆ ಇಳಿದಿದೆ 2000 ರಲ್ಲಿ ಇದು 3.2 ಆಗಿತ್ತು,

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (ಎಫ್‌ಪಿಎಐ) ಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ಪ್ರಾಂಶುಪಾಲ ಡಾ. ರತ್ನಮಾಲಾ  ದೇಸಾಯಿ, “ಪ್ರಜಾಪ್ರಭುತ್ವ ದೇಶದಲ್ಲಿ ವ್ಯಕ್ತಿಗಳ ಸಂತಾನೋತ್ಪತ್ತಿ ಹಕ್ಕುಗಳನ್ನು ರಾಜ್ಯವು ಕಸಿದುಕೊಳ್ಳಲು ಸಾಧ್ಯವಿಲ್ಲ. ಬಲಾತ್ಕಾರ, ಬಲವಂತ ಮತ್ತು ಪ್ರೋತ್ಸಾಹಕಗಳು ಜನಸಂಖ್ಯೆಯ ಚಲನಶಾಸ್ತ್ರದ ಮೇಲೆ ಪರಿಣಾಮ ಬೀರುವುದಿಲ್ಲ.

"ನಮ್ಮ ಹಿಂದಿನ ಅನುಭವಗಳಿಂದ ನಮಗೆ ಕೆಟ್ಟ ಉದಾಹರಣೆಗಳು ಕಂಡಿದೆ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಅಸಮಾನತೆ ಮತ್ತು ಸಾಮಾಜಿಕ ಮತ್ತು ಲಿಂಗ ತಾರತಮ್ಯಗಳು ಸರ್ಕಾರಕ್ಕೆ ಸಂಬಂಧಪಟ್ಟ ವಿಷಯಗಳಾಗಿವೆ. ಒಬ್ಬ ಮಹಿಳೆ ಕೇವಲ ಕಾಗದದಲ್ಲಿ ಮಾತ್ರವಲ್ಲದೆ ಶಿಕ್ಷಣ, ಉದ್ಯೋಗ, ಆಸ್ತಿಯಲ್ಲಿ ಇತರರಲ್ಲಿ ಸಮಾನ ಅವಕಾಶಗಳು ಮತ್ತು ಹಕ್ಕುಗಳನ್ನು ಹೊಂದಿರಬೇಕು” ಎಂದರು. ರಾಜ್ಯ ಸರ್ಕಾರ ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡಬೇಕು ಮತ್ತು ತಾಯಿಯ ಮತ್ತು ನವಜಾತ ಶಿಶು ಮರಣವನ್ನು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು. ಶಾಶ್ವತ ಗರ್ಭನಾಶಕ್ಕೆ  ಬದಲಾಗಿ, ದೀರ್ಘಕಾಲೀನ ರಿವರ್ಸಿಬಲ್ ಗರ್ಭನಿರೋಧಕವನ್ನು ಪ್ರೋತ್ಸಾಹಿಸಬೇಕು. ಕಾನೂನು  ಮಹಿಳೆಯರಿಗೆ ಸಂತಾನೋತ್ಪತ್ತಿ ಆರೋಗ್ಯದ ಹಕ್ಕನ್ನು ಮತ್ತಷ್ಟು ಕುಗ್ಗಿಸುತ್ತದೆ. ಲೈಂಗಿಕ ಆಯ್ಕೆ ಮತ್ತು ಅಸುರಕ್ಷಿತ ಗರ್ಭಪಾತದ ಅಕ್ರಮ ಅಭ್ಯಾಸಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. "ಭಾರತದಲ್ಲಿ ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಹೆಚ್ಚು ವಿವರಿಸುವುದಿಲ್ಲ" ಎಂದು ಅವರು ಹೇಳಿದರು.

ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ  ಸೆಳೆಯುವುದುರ್ಕಾರದ ತಂತ್ರವಾಗಿದೆ ಎಂದು ಜನಸಂಖ್ಯಾ ತಜ್ಞರು ಹೇಳಿದ್ದಾರೆ. "ನಾವು ಇದೀಗ ಗಮನಹರಿಸಲು ಇನ್ನೂ ಅನೇಕ ಪ್ರಮುಖ ಸಮಸ್ಯೆಗಳನ್ನು ಹೊಂದಿದ್ದೇವೆ. ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಮಗೆ ತಂತ್ರಗಳು, ಸಂಶೋಧನೆ, ಲಸಿಕೆ ಉತ್ಪಾದನೆ, ವಿತರಣಾ ಕಾರ್ಯತಂತ್ರಗಳ ಅಗತ್ಯವಿದೆ. ಆರ್ಥಿಕತೆಯು ಕುಸಿದಿದೆ, ಇಂಧನ ಬೆಲೆಗಳು ಏರುತ್ತಿವೆ. ಕಣ್ನೆದುರೇ ಹಲವಾರು ಸಮಸ್ಯೆಗಳಿರುವುದರಿಂದ, ನಾವು ಸಂಪೂರ್ಣವಾಗಿ ಅಗತ್ಯವಿಲ್ಲದ ಯಾವುದನ್ನಾದರೂ ಮಾತನಾಡಲು ಮುಂದಾಗುತ್ತೇವೆ” ಎಂದು ಹೆಸರು ಹೇಳಲು ಬಯಸದ ಸಂಶೋಧಕ ಮತ್ತು ಜನಸಂಖ್ಯಾ ತಜ್ಞರು ಹೇಳಿದ್ದಾರೆ.

ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಮತ್ತು ಮಾನವಶಾಸ್ತ್ರಜ್ಞ ಪ್ರೊಫೆಸರ್ ಮದನ್, “ನಿಜವಾದ ಸಮಸ್ಯೆ ಅಭಿವೃದ್ಧಿಯ ಕೊರತೆ. ಅಭಿವೃದ್ಧಿ ಹೆಚ್ಚಾದಾಗ, ಮಕ್ಕಳನ್ನು ಹೊಂದುವ ಪ್ರಮಾಣವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ ಎಂದು ತೋರಿಸಲು ನಮ್ಮಲ್ಲಿ 150 ವರ್ಷಗಳಿಗಿಂತ ಹೆಚ್ಚಿನ ದತ್ತಾಂಶಗಳಿದೆ. ಬಡವರು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದುತ್ತಾರೆ. ಅವರು ಮಧ್ಯಮ ವರ್ಗಕ್ಕೆ ಏರುತ್ತಿದ್ದಂತೆ ತೆ, ಟಿಎಫ್ಆರ್ ಕಡಿಮೆಯಾಗುತ್ತದೆ. ವಾಸ್ತವದಲ್ಲಿ ಈ ನೀತಿಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಮತ್ತು ಅದು ಫಲಪ್ರದವಾಗುವುದಿಲ್ಲ” ಎಂದರು. 

ಮೂಲಸೌಕರ್ಯ, ಉತ್ತಮ ಮತ್ತು ಸ್ಥಿರ ಶಕ್ತಿಗಳಲ್ಲಿ ಆಳವಾದ ಹೂಡಿಕೆ, ಉತ್ತಮ ರಸ್ತೆಗಳು, ಐಟಿ ಮೂಲಸೌಕರ್ಯ, ನೆಟ್‌ವರ್ಕ್, ಉಚಿತ ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯ, ಕಚ್ಚಾ ವಸ್ತುಗಳು ಇತ್ಯಾದಿಗಳಲ್ಲಿ ಬಲವಾಗಿ ಹೂಡಿಕೆ ಮಾಡಲು ರಾಜ್ಯ ಸರ್ಕಾರ ತನ್ನ ಶಕ್ತಿಯನ್ನು ವೆಚ್ಚ ಮಾಡಬೇಕು  ಎಂದು ತಜ್ಞರು ವಾದಿಸುತ್ತಾರೆ, ಸಣ್ಣ ಉದ್ಯಮಗಳನ್ನು ಬಲಪಡಿಸಬೇಕು ಮತ್ತು ಶಕ್ತಿಯನ್ನು ವ್ಯರ್ಥ ಮಾಡಬಾರದು ಎನ್ನುತ್ತಾರೆ.

ನವಜಾತ ಶಿಶು ಮರಣ ಒಂದು ಸಮಸ್ಯೆ

ಕರ್ನಾಟಕದ ಫಲವತ್ತತೆ ದರವು 1.7 (2019-20) ಇತರ ಉತ್ತರ ಭಾರತದ ರಾಜ್ಯಗಳಿಗಿಂತ (ಯುಪಿ 2.7, 2015-16) ಕಡಿಮೆ, ಆದರೆ ನವಜಾತ ಶಿಶುವಿನ ಮರಣವು 15.8 (ಪ್ರತಿ ಸಾವಿರ ಜನನಗಳಿಗೆ) ತುಂಬಾ ಹೆಚ್ಚಾಗಿದೆ. ಕೇರಳದಲ್ಲಿ ಇದು 3.4 (ಪ್ರತಿ ಸಾವಿರ ಜನನಗಳಿಗೆ) ಇದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್ -4), 2015-16ರ ಪ್ರಕಾರ, ಶೇಕಡಾ 77 ರಷ್ಟು ಗರ್ಭನಾಶವು ಟ್ಯೂಬೆಕ್ಟೊಮಿಗಳಾಗಿವೆ. ಮಾಹಿತಿಯ ಪ್ರಕಾರ, ಶೇಕಡಾ 54 ರಷ್ಟು ಭಾರತೀಯ ಪುರುಷರು ಮಹಿಳೆಯರು ಯಾವ ಗರ್ಭನಿರೋಧಕವನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾರೆ, ಆದರೆ ಗರ್ಭನಿರೋಧಕದ ನಿರ್ವಹಣೆ ಮಾತ್ರ ಅಸಹನೀಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com