ಕೊಡಗಿನಲ್ಲಿ ವಿದ್ಯುತ್ ತಗುಲಿ ಕಾಡಾನೆ ಸಾವು, ಜಿಲ್ಲೆಯಲ್ಲಿ ಈ ತಿಂಗಳಲ್ಲೇ ಜಂಬೋನ ನಾಲ್ಕನೇ ಅಸಹಜ ಸಾವು

ಕೊಡಗು ಗ್ರಾಮದ ಕೃಷಿಭೂಮಿಯಲ್ಲಿ ಅಕ್ರಮವಾಗಿ ವಿದ್ಯುತ್ ಮಾರ್ಗವನ್ನು ಅಳವಡಿಸಿದ ನಂತರ ಸುಮಾರು 38 ವರ್ಷದ ಗಂಡು ಆನೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ. ಇದರೊಂದಿಗೆ ಈ ತಿಂಗಳು ಜಿಲ್ಲೆಯಲ್ಲಿ ವರದಿಯಾದ....
ಕಾಡಾನೆ ಸಾವು
ಕಾಡಾನೆ ಸಾವು

ಮಡಿಕೇರಿ: ಕೊಡಗು ಗ್ರಾಮದ ಕೃಷಿಭೂಮಿಯಲ್ಲಿ ಅಕ್ರಮವಾಗಿ ವಿದ್ಯುತ್ ಮಾರ್ಗವನ್ನು ಅಳವಡಿಸಿದ ನಂತರ ಸುಮಾರು 38 ವರ್ಷದ ಗಂಡು ಆನೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ. ಇದರೊಂದಿಗೆ ಈ ತಿಂಗಳು ಜಿಲ್ಲೆಯಲ್ಲಿ ವರದಿಯಾದ ಆನೆಯ ನಾಲ್ಕನೇ ಅಸ್ವಾಭಾವಿಕ ಸಾವು ಇದಾಗಿದೆ.

ಈ ಆನೆ ಕುಶಾಲ್‌ನಗರದ ಅತ್ತೂರು ರಿಸರ್ವ್ ಫಾರೆಸ್ಟ್ ಪ್ರದೇಶದಿಂದ ವಲಸೆ ಬಂದಿರಬಹುದೆಂದು ಶಂಕಿಸಲಾಗಿದೆ.

ಹೊಸಕಾಡು ನಿವಾಸಿ ಚಂದ್ರು ಅವರು ತಮ್ಮ ಶುಂಠಿ ಕೃಷಿಭೂಮಿಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ವಿದ್ಯುತ್ ಬೇಲಿ ಹಾಕಿದ್ದರು ಎನ್ನಲಾಗಿದೆ. ಆದರೆ, ಹತ್ತಿರದ ಖಾಸಗಿ ಮನೆಯೊಂದರಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬೇಲಿ ಅಳವಡಿಸಲಾಗಿದೆ. ಇದಲ್ಲದೆ, ಈ ವಿದ್ಯುತ್ ಮಾರ್ಗ ಸ್ಥಾಪನೆಯು ರಾಜ್ಯ ವಿದ್ಯುತ್ ಕಾಯ್ದೆಗೆ ವಿರುದ್ಧವಾಗಿದೆ.

ಹೊಸಕಡು-ಬಸವನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಈ ಘಟನ ನಡೆದಿದ್ದು, ಅಟ್ಟುರು ರಿಸರ್ವ್ ಫಾರೆಸ್ಟ್ ಪ್ರದೇಶದಿಂದ ಆಲೆ ವಲಸೆ ಬಂದಿರಬಹುದು ಎನ್ನಲಾಗಿದೆ. ಆನೆ ಚಂದ್ರು ಒಡೆತನದ ಕೃಷಿಭೂಮಿಯನ್ನು ದಾಟಲು ಪ್ರಯತ್ನಿಸಿದಾಗ ವಿದ್ಯುತ್ ತಗುಲಿ ಮೃತಪಟ್ಟಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಎಸಿಎಫ್ ನೆಹರೂ, ಆರ್‌ಎಫ್‌ಒ ಅನನ್ಯಾ ಕುಮಾರ್, ಕುಶಾಲ್‌ನಗರ ಗ್ರಾಮೀಣ ಪೊಲೀಸರು, ಸಿಇಎಸ್‌ಸಿ ಅಧಿಕಾರಿಗಳು ಮತ್ತು ಇತರರು ಭೇಟಿ ನೀಡಿ, ಪರಿಶೀಲಿಸಿದರು.

ಅಕ್ರಮ ವಿದ್ಯುತ್ ಬೇಲಿಯಿಂದಾಗಿ ಆನೆ ಮೃತಪಟ್ಟಿರುವುದರಿಂದ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಹಾಸನದ ತಜ್ಞ ಸಿಇಎಸ್ಸಿ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿದರು. ವಿದ್ಯುತ್ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯೊಂದಿಗೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ ಎಂದು ಅನನ್ಯಾ ಕುಮಾರ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com