ಆಧಾರ್ ಸಂಖ್ಯೆ ಮೂಲಕ ನೇರ ನಗದು ವರ್ಗಾವಣೆ: ಕರ್ನಾಟಕ ರಾಜ್ಯವೇ ಮೊದಲು 

ಆಧಾರ್ ಪಾವತಿ ಸೇತುವೆ ವ್ಯವಸ್ಥೆ ಆಧಾರಿತ (ಎಪಿಬಿಎಸ್) ನೇರ ಲಾಭ ವರ್ಗಾವಣೆ(ಡಿಬಿಟಿ)ನ್ನು ಫಲಾನುಭವಿಗಳಿಗೆ ತಲುಪಿಸುವ ರಾಜ್ಯಗಳಲ್ಲಿ ದೇಶದಲ್ಲಿ ಕರ್ನಾಟಕವೇ ಮೊದಲು. ಇದರ ಫಲಾನುಭವಿಗಳಲ್ಲಿ ಬಹುತೇಕರು ರೈತರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಧಾರ್ ಪಾವತಿ ಸೇತುವೆ ವ್ಯವಸ್ಥೆ ಆಧಾರಿತ (ಎಪಿಬಿಎಸ್) ನೇರ ಲಾಭ ವರ್ಗಾವಣೆ(ಡಿಬಿಟಿ)ನ್ನು ಫಲಾನುಭವಿಗಳಿಗೆ ತಲುಪಿಸುವ ರಾಜ್ಯಗಳಲ್ಲಿ ದೇಶದಲ್ಲಿ ಕರ್ನಾಟಕವೇ ಮೊದಲು. ಇದರ ಫಲಾನುಭವಿಗಳಲ್ಲಿ ಬಹುತೇಕರು ರೈತರು.

ಈ ಡಿಬಿಟಿ ವ್ಯವಸ್ಥೆಯು ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಸಂಖ್ಯೆಯ ಬದಲು ಹಣಕಾಸಿನ ವಿಳಾಸವಾಗಿ ಬಳಸುತ್ತದೆ, ಈ ಮೊದಲು ಇದ್ದ ಪರಿಸ್ಥಿತಿಯಿಂದ ಭ್ರಷ್ಟಾಚಾರ, ಗುರುತು ಮತ್ತು ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿತ್ತು ಎಂದು ಡಿಪಿಎಆರ್ (ಇ-ಆಡಳಿತ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಆಧಾರ್ ಮೂಲದ ಡಿಬಿಟಿಯನ್ನು ಯಾವ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂಬುದು ಕರ್ನಾಟಕಕ್ಕೆ ವಿಶಿಷ್ಟವಾಗಿದೆ. ಈ ಮೊದಲು, ಫಲಾನುಭವಿಗಳ ಗುರುತು ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನವಿರಲಿಲ್ಲ ಎಂದು ಎಂದು ರಾಜೀವ್ ಚಾವ್ಲಾ ಹೇಳಿದ್ದಾರೆ.

ಆಗಾಗ್ಗೆ, ಮಧ್ಯವರ್ತಿಗಳು ಮತ್ತು ಕೆಲವು ಭ್ರಷ್ಟ ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳ ವೆಚ್ಚದಲ್ಲಿ ಕ್ಷೇತ್ರ ಪರ್ಯಟಣೆ ನಡೆಸುತ್ತಿದ್ದರು. ಆಧಾರ್ ಮೂಲದ ಡಿಬಿಟಿಗಳಿಂದಾಗಿ ಇಂದು ಶೂನ್ಯ ಗುರುತು ಕಳ್ಳತನಕ್ಕೆ ಇಳಿದಿದೆ. ಕಳೆದ ಮೂರು ವರ್ಷಗಳಲ್ಲಿ, 500 ಲಕ್ಷಕ್ಕೂ ಹೆಚ್ಚು ವಹಿವಾಟಿನಲ್ಲಿ 13,200 ಕೋಟಿ ರೂಪಾಯಿಯನ್ನು ಕರ್ನಾಟಕದ ಆಧಾರ್ ಮೂಲದ ಡಿಬಿಟಿ ಪ್ಲಾಟ್‌ಫಾರ್ಮ್ ಮೂಲಕ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. 20 ಇಲಾಖೆಗಳಲ್ಲಿ 117 ಯೋಜನೆಗಳ ಪ್ರಯೋಜನಗಳನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ. ಈ ಪೈಕಿ 37 ಯೋಜನೆಗಳು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿವೆ. ಪಿಎಂ-ಕಿಸಾನ್ ರಾಜ್ಯ ವಲಯ, ಹಾಲು ಪ್ರೋತ್ಸಾಹ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಕೋವಿಡ್ ಪ್ಯಾಕೇಜ್ ಯೋಜನೆಗಳು ಕೆಲವು ಪ್ರಮುಖ ಯೋಜನೆಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 320 ಲಕ್ಷ ವಹಿವಾಟಿನಲ್ಲಿ 1,000 ಕೋಟಿ ರೂಪಾಯಿ ರೈತರಿಗೆ ವಿತರಿಸಲಾಗಿದೆ ಎಂದು ವಿವರಿಸಿದರು.

ರಾಜ್ಯವು 70 ಲಕ್ಷ ರೈತರ ದತ್ತಾಂಶವನ್ನು ಹೊಂದಿದೆ ಮತ್ತು ಅವರ ಭೂ ಹಿಡುವಳಿ ಮತ್ತು ಅವರು ಬೆಳೆಯುವ ಬೆಳೆಗಳ ವಿವರಗಳು ಮತ್ತು ವ್ಯಾಪ್ತಿಯನ್ನು ಹೊಂದಿದೆ. ಅಂಕಿಅಂಶಗಳನ್ನು ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUITS) ಎಂದು ಕರೆಯಲಾಗುತ್ತದೆ. “ಸರ್ಕಾರಿ ಯೋಜನೆಗಳ ಲಾಭ ಪಡೆಯಲು, ರೈತರು ಗುರುತು ಚೀಟಿ ಒದಗಿಸಬೇಕು.

ಎಂಎಸ್ಪಿಯ ವಿಷಯದಲ್ಲಿ, ಪರಿಶೀಲನೆ ವಿವರಗಳನ್ನು ಭೂಮಿ - ಆನ್‌ಲೈನ್ ಭೂ ದಾಖಲೆಗಳ ಮೂಲಕ ನಡೆಸಲಾಗುತ್ತದೆ  ಮತ್ತು ಅದೇ ರೀತಿ ಬೆಳೆ ವಿಮೆಗಾಗಿ ಕೂಡ ನೀಡಲಾಗುತ್ತದೆ. ಭೂಮಿ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ 70 ಲಕ್ಷ ರೈತರು ಮತ್ತು 250 ಲಕ್ಷ ಕೃಷಿ ಪ್ಲಾಟ್‌ಗಳಿವೆ ಎಂದು ಕೃಷಿ ವಲಯದಲ್ಲಿ ವಂಚನೆ, ಮೋಸಗಳನ್ನು ತಡೆಯುವ ಬಗ್ಗೆ ಹೇಳಿದರು.

ರೈತರಲ್ಲದೆ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ ಗೌರವ (ಆಶಾ), ಅಂಗನವಾಡಿ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು ಆಧಾರ್ ಮೂಲದ ಡಿಬಿಟಿ ಬಳಸಿ ಮನ್ನಣೆ ಪಡೆಯುತ್ತಿದ್ದಾರೆ. ಫಲಾನುಭವಿಗಳಿಗೆ ಅವರ ಪಾವತಿ ಸ್ಥಿತಿಯನ್ನು ಪತ್ತೆಹಚ್ಚಲು ಸರ್ಕಾರ ಡಿಬಿಟಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ನಾವು ಆಧಾರ್ ಮೂಲದ ಡಿಬಿಟಿ ಮೂಲಕ ಎಲ್ಲಾ ಸರ್ಕಾರಿ ಯೋಜನೆಗಳನ್ನು ಆನ್-ಬೋರ್ಡಿಂಗ್ ಪ್ರಕ್ರಿಯೆಯಲ್ಲಿದ್ದೇವೆ. ಪಿಂಚಣಿ ಪ್ರಯೋಜನಗಳನ್ನು ಪಡೆಯಲು ಮುಖ ಗುರುತಿಸುವಿಕೆಯ ಬಳಕೆಯನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪ್ರಯತ್ನಿಸಲಾಗುತ್ತಿದೆ. ಕೋವಿಡ್ ಕಾರಣ ಇದನ್ನು ತಡೆಹಿಡಿಯಲಾಗಿದೆ ಎಂದು ಇ ಆಡಳಿತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com