ಬೆಂಗಳೂರು: ಫುಡ್ ಕಿಟ್ ಆಸೆಗೆ ಬಿದ್ದು ಚಿನ್ನದ ಸರ ಕಳೆದುಕೊಂಡ ಮಹಿಳೆ

ಅಪರಿಚಿತ ವ್ಯಕ್ತಿಯ ಮೋಸದ ಮಾತಿಗೆ ಮರುಳಾದ 56 ವರ್ಷದ ಮಹಿಳೆಯೊಬ್ಬರು ತಮ್ಮ ಚಿನ್ನದ ಸರ ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪರಿಚಿತ ವ್ಯಕ್ತಿಯ ಮೋಸದ ಮಾತಿಗೆ ಮರುಳಾದ 56 ವರ್ಷದ ಮಹಿಳೆಯೊಬ್ಬರು ತಮ್ಮ ಚಿನ್ನದ ಸರ ಕಳೆದುಕೊಂಡಿದ್ದಾರೆ.

ಮನೆ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಎಂಬಾಕೆ ವಂಚನೆಗೊಳಗಾಗಿದ್ದಾರೆ. ಸೋಮವಾರ ಬೆಳಗ್ಗೆ 8.45ರ ಸುಮಾರಿಗೆ ಮಲ್ಲಮ್ಮ ಮನೆಕೆಲಸಕ್ಕ ತೆರಳುತ್ತಿದ್ದರು,  ಈ ವೇಳೆ ಬಂದ ಬೈಕ್ ಸವಾರನೊಬ್ಬ ಅಡ್ರೆಸ್ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾನೆ.

ಇಲ್ಲಿ ಅಗತ್ಯವಿರುವವರಿಗೆ ಯಾರೋಬ್ಬರು ಫುಡ್ ಕಿಟ್ ಮತ್ತು ಹಣ ನೀಡುತ್ತಿದ್ದಾರೆ, ಇಲ್ಲಿ ಚೌಡೇಶ್ವರಿ ದೇವಾಲಯ ಎಲ್ಲಿದೆ ಎಂದು ಕೇಳಿದ್ದಾನೆ.ಆಕೆ ಆತನಿಗೆ ವಿಳಾಸ ಹೇಳಿದ್ದಾಳೆ, ನಿಮಗೆ ರೇಷನ್ ಕಿಟ್ ಮತ್ತು ಣ ಬೇಕಿದ್ದರೆ ಬನ್ನಿ ಎಂದು ಹೇಳಿದಾಗ ಆತನ ಜೊತೆ ಮಹಿಳೆ ಹೋಗಿದ್ದಾಳೆ.

ಆತನ ಜೊತೆ ಬೈಕ್ ನಲ್ಲಿ ದೇವಾಲದ ಬಳಿ ತೆರಳಿದ್ದಾಳೆ. ಹೋಗುವ ಮೊದಲು ಕತ್ತಿಗೆ ಹಾಕಿರುವ ಚಿನ್ನದ ಸರ ತೆಗೆಯುವಂತೆ ಹೇಳಿದ್ದಾನೆ. ಸರ ಇದ್ದರೆ ಫುಡ್ ಕಿಟ್ ನೀಡುವುದಿಲ್ಲ ಎಂಬ ಮಾತನ್ನು ನಂಬಿದ ಆಕೆ ಸರ ಕಳಚಿ ಆತನ ಸ್ಕೂಟರ್ ನಲ್ಲಿ ಇರಿಸಿದ್ದಾಳೆ, ನಂತರ ಆಕೆಯನ್ನು ಅಲ್ಲಿಯೇ ನಿಲ್ಲುವಂತೆ ಹೇಳಿ ತಾನು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ.ಸ್ವಲ್ಪ ಹೊತ್ತು ಕಾದ ನಂತರ ಆಕೆಗೆ ಸತ್ಯ ತಿಳಿದಿದೆ. 12 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com