ವಿಜಯಪುರ: ವಿಜಯಪುರ ನಗರದ ತಕ್ಕೆ ಮಸೀದಿ ಬಳಿ ಬುಧವಾರ ರಾತ್ರಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಭಾರೀ ಮಳೆಯಾಗುತ್ತಿದ್ದರಿಂದ ಮಸೀದಿ ಬಳಿ ಆಶ್ರಯ ಪಡೆದಿದ್ದ ಆಶೋಕ್ರಮ್ ಕಾರ್ ಜೋಳ್(48), ಬಾಷಾಸಾಬ್ ಕರಜಗಿ(40) ಹಾಗೂ ಜಾವೆದ್ ಜಾಲ್ಗೆರಿ(33) ಅವರಿಗೆ ಸಿಡಿಲು ಬಡಿದು ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಬೀನಾ ಮತ್ತು ಮತ್ತೊಬ್ಬ ಅಪರಚಿತ ವ್ಯಕ್ತಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹಡದಲಿ ಗ್ರಾಮದ ಬಳಿ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ 9 ಮೇಕೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಈ ಮಧ್ಯೆ,ವಿಜಯಪುರ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುಂದುವರಿದಿದೆ.
Advertisement